Sunday 29 January 2012

ನ್ಯಾಯದ ಧಿಕ್ಕಾರದ ನಡುವೆ ಅನ್ಯಾಯದ ಬಸಿರು...!


ಸೀನ್ 1, ಕಾರ್ಪೋರೇಷನ್ ಸರ್ಕಲ್ ಟುವಾಡ್ಸ್ ಕೆಜಿ ರೋಡ್, ಹಗಲು/ಬೆಳಗ್ಗೆ 10.30

ಮೊನ್ನೆ ಯಾವುದೋ ಅರ್ಜೆಂಟ್ ಕೆಲಸ ನಿಮಿತ್ತ ಮೆಜೆಸ್ಟಿಕ್ಗೆ ಬಸ್ನಲ್ಲಿ ಹೋಗುತ್ತಿದ್ದಾಗ ಅನಿರೀಕ್ಷಿತವಾದ ಟ್ರಾಫಿಕ್ ಜಾಮ್ ಎದ್ದು ಕಂಡಿತ್ತು. ನನ್ನಂತೆ ಅರ್ಜೆಂಟ್ ಕೆಲಸವಿದ್ದವರು, ಆಫೀಸಿಗೆ ಹೋಗುವವರು, ದೂರದ ಊರಿಗೆ ಹೋಗಬೇಕಾದವರು, ಶಾಲಾ-ಕಾಲೇಜಿಗೆ ಹೋಗುತ್ತಿದ್ದ ಹೆಣ್ಣುಮಕ್ಕಳು, ವಿದ್ಯಾರ್ಥಿಗಳು, ವಯಸ್ಸಾದವರು ಎಲ್ಲರೂ ನಾನಿದ್ದ ಬಸ್ನಲ್ಲಿ ಕುಳಿತಿದ್ದರು. ಸುಮಾರು ಅರ್ಧ ಗಂಟೆವರೆಗೂ ಗಾಡಿ ನಿಂತಲ್ಲೇ ನಿಂತಿತ್ತು. ಹೀಗಿದ್ದರೂ ಆ ದಿನದ ಟ್ರಾಫಿಕ್ ಜಾಮ್ ಕೆಲವು ಹೊತ್ತಿನವರೆಗೆ ವಿಶೇಷವೆನಿಸದಿದ್ದರೂ ಜಾಮ್ನ ವ್ಯಾಲಿಡಿಟಿ ಹೆಚ್ಚಾದಂತೆಲ್ಲಾ ನನಗ್ಯಾಕೋ ಡೌಟ್ ಬರಲಿಕ್ಕೆ ಶುರುವಾಯಿತು. ಪಕ್ಕದಲ್ಲಿದ್ದವರನ್ನು ಕೇಳಿದೆ. ಯಾರ ಹತ್ತಿರವೂ ಆ ಟ್ರಾಫಿಕ್ ಜಾಮ್ಗೆ ಸಂಬಂಧಪಟ್ಟ ಹಾಗೆ ಮಾಹಿತಿ ಸಿಗಲಿಲ್ಲ. ಬಸ್ನ ಡ್ರೈವರ್ ತಲೆಕೆರೆದುಕೊಳ್ಳುತ್ತಿದ್ದ. ಮನಸ್ಸಿನಲ್ಲಿ ಯಾರನ್ನೋ ಬಯ್ಯುತ್ತಿದ್ದ. ಕಿಟಕಿ ಆಚೆ ನೋಡಿದೆ. ನಮ್ಮ ಹಿಂದೆ ಮುಂದೆ ನಿಂತಿದ್ದ ಬಸ್ನ ಜನರೆಲ್ಲಾ ಇಳಿದು ತಮ್ಮ ಪಾಡಿಗೆ ನಡೆದುಕೊಂಡು `ಇದು ಮುಗಿಯದ ಕಥೆ' ಅಂತ ನಡೆದುಕೊಂಡು ಹೋಗುತ್ತಿದ್ದರು. ಬಸ್ಗಳು ಸ್ವಲ್ಪ ಮುಂದೆ ಹೋದವು. ಡ್ರೈವರ್ ತಲೆಕೆಟ್ಟು ಗಾಡಿಯನ್ನು `ಯೂ ಟರ್ನ್  ಮಾಡಿಕೊಂಡು ಟೌನ್ ಹಾಲ್ ಫ್ಲೈ ಓವರ್ ಹತ್ತಿ ಗೂಡ್ಸ್ ಶೆಡ್ ರೋಡ್ ಮೂಲಕ ಮೆಜೆಸ್ಟಿಕ್ ಹೇಗೋ ಮುಟ್ಟಿಸಿದ. ಇಡೀ ವಾತಾವರಣ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುವ ಮನಸ್ಸುಗಳ ನೋವನ್ನು ಹೇಳುತ್ತಿತ್ತು. ಎಲ್ಲರೂ ಆ ದಿನದ ಟ್ರಾಫಿಕ್ ಜಾಮ್ ಬಗ್ಗೆಯೇ ಮುನಿಸಿಕೊಂಡಿದ್ದರು. ಆದರೆ ಟ್ರಾಫಿಕ್ ಜಾಮ್ ಕಾರಣ ಗೊತ್ತಾಗಲಿಲ್ಲ.

ಸೀನ್ 2: ಮೆಜೆಸ್ಟಿಕ್, ಹಗಲು/ಸಮಯ ಮಧ್ಯಾಹ್ನ 12 ಗಂಟೆ
ಮೆಜೆಸ್ಟಿಕ್ ತುಂಬಾ ಜನದೋಕುಳಿ... ಸುಮಾರು ಹತ್ತಾರು ಪೋಲಿಸರು ಆ ಕಡೆ ಈ ಕಡೆ ಓಡಾಡುತ್ತಿದ್ದರು. ಯಾವುದಾದ್ರೂ ಮರ್ಡರ್ ಆಗಿರಬೇಕು ಅಂತ ಅಂದುಕೊಂಡೆ. ನಾನು ಹೋಗಬೇಕಾಗಿದ್ದ ಬಸ್ನ ಫ್ಲಾಟ್ ಫಾರಂ ಇನ್ನು ಸಿಕ್ಕಿರಲಿಲ್ಲ.ಫ್ಲಾಟ್ ಫಾರಂ -17ರಲ್ಲಂತೂ ಜನರ ದಾಂಧಲೆ ಅಬ್ಬರವಾಗಿತ್ತು. ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಮಾರತಹಳ್ಳಿ ಕಡೆ ಕೂಲಿ ಕೆಲಸಕ್ಕೆ ಹೋಗಲಿಕ್ಕಂತಲೇ ದಿನನಿತ್ಯ ಓಡಾಡುತ್ತಿದ್ದ ಜನರು ಕಂಗಾಲಾಗಿದ್ದರು. ಇವತ್ತು ಕೆಲಸ ಮಾಡಲಿಲ್ಲವೆಂದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ...! ಕೆಲವರ ಆತುರ, ವರ್ತನೆ ಹಾಗೆಯೇ ಇತ್ತು. ಏಷ್ಟು ಕಾದರೂ ಬಸ್ ಬರಲಿಲ್ಲ. ಕಂಟ್ರೋಲರ್ `ಬಸ್ ಬರುತ್ತೇ ಹೆದ್ರಬ್ಯಾಡ್ರಿ... ನಾ ಏನ್ ಮಾಡ್ಲಿರೀ.. ಅವ್ರು ಗಲಾಟೆ ಮಾಡಿದ್ರೆ...' ಅಂತ ಜನ ಕೇಳಿದ ಹತ್ತು ಪ್ರಶ್ನೆಗಳಿಗೆ ರೆಡಿಮೇಡ್ ಉತ್ತರ ಕೊಡುತ್ತಿದ್ದ. ನನಗ್ಯಾಕೋ ಟ್ರಾಫಿಕ್ ಜಾಮ್ ಯಾಕೆ ಆಗಿದೆ ಅಂತ ಕೇಳಲಿಕ್ಕೆ ಮನಸ್ಸಾಗಲಿಲ್ಲ. ಯಾವುದೋ ಬಸ್ ಬಂದಿತು. ನೂರಾರು ಜನರು ಒಮ್ಮಿದೊಮ್ಮೆಲೇ ನುಗ್ಗಿದರು. ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಹುಡುಗರು ಬಾಗಿಲ ಕಡೆಗೆ ಓಡದೇ ಸೀದಾ ಕಿಟಿಕಿ ಮೂಲಕ ನುಗ್ಗಿ ತಮ್ಮ ಸೀಟನ್ನು ರಿಸರ್ವ್ ಮಾಡಿಕೊಳ್ಳುತ್ತಿದ್ದರು. ತೆಳ್ಳಗೆ ಇದ್ದ ಹುಡುಗರು ತುಂಬಾ ಈಝಿಯಾಗಿ ಕಿಟಿಕಿ ಮೂಲಕ ಒಳಗೆ ನುಗ್ಗಿದರು. ಪ್ಯಾಂಟು ಶರ್ಟ್ ಹಾಕಿಕೊಂಡ ಒಬ್ಬ ಆಫೀಷಿಯಲ್ ಪರ್ಸನ್ ನುಗ್ಗಲಿಕ್ಕೆ ಹೋಗಿ ತನ್ನ ಕತ್ತನ್ನು ಸಿಕ್ಕಿಸಿಕೊಂಡು ಓದ್ದಾಡುತ್ತಿದ್ದ. ಹೆಗಲಿಗೆ ಹಾಕಿಕೊಂಡಿದ್ದ ಬ್ಯಾಗು ಕೆಳಗೆ ಬಿದ್ದಿತು. ಈತನ ಕುತ್ತಿಗೆ ಒಳಗೆ ಇದೆ. ನುಗ್ಗಲು ತಿಣುಕುತ್ತಿದ್ದ. ಕೊನೆಗೆ ಬಸ್ನೊಳಗಿದ್ದ ಮಹಾನುಭಾವ ಇವರನ್ನು ಹಿಡಿದೆಳೆದ. ಇನ್ಯಾರೋ ಮಹಾನುಭಾವ ಬಿದ್ದಿದ್ದ ಬ್ಯಾಗನ್ನು ತೆಗೆದುಕೊಟ್ಟ. ಥ್ಯಾಂಕ್ಸ್ ಹೇಳೋಕೆ ಅಂತ ಆ ಪರ್ಸನ್ ತಿರುಗಿದರೆ ಬ್ಯಾಗ್ ಕೊಟ್ಟ ವ್ಯಕ್ತಿ ತನ್ನ ಬಸ್ ಬಂತು ಅಂತ ಓಡುತ್ತಿದ್ದ.
ಪಾಪ.. ಬಸ್ ಬಂದ ರಭಸದಲ್ಲಿ ಕೆಲವು ಉತ್ತರ ಭಾರತದ ಹುಡುಗರು ಲೇಡೀಸ್ ಸೀಟಲ್ಲಿ ಗೊತ್ತಿಲ್ಲದೇ ಕುಳಿತುಕೊಂಡಿದ್ದರು. ಅರ್ಜೆಂಟಲ್ಲಿ ಏನೋ ಸೀಟು ಸಿಕ್ತಲ್ಲ ಅಂತ ಖುಷಿಯಲ್ಲಿದ್ದರು. ಅವರ ಜಾಗಕ್ಕೆ ಬಂದ ನಾಲ್ಕೈದು ಹೆಂಗಸರಲ್ಲಿ ಒಬ್ಬಳು `ಇದು ಲೇಡಿಸ್ ಸೀಟು.. ಏಳಿ' ಅಂತ ಅವಾಜ್ ಹಾಕಿದಳು. ಇವರಿಗೆ ಕನ್ನಡ ಅರ್ಥವಾಗದು. ಆ ಘಟವಾಣಿಗೆ ಹಿಂದಿ ಅಷ್ಟಕಷ್ಟೇ. ಎರಡು ಮೂರು ನಿಮಿಷ ಇವರಿಬ್ಬರ ಭಾಷಾಕಲಹ ಹಾಗೆಯೇ ಮುಂದುವರೆಯಿತು. ಅಲ್ಲಿದ್ದ ಒಂದು ಕಾಲೇಜು ಹುಡುಗಿ ಅವರಿಗೆ ಹಿಂದಿಯಲ್ಲಿ ಅರ್ಥವಾಗುವಂತೆ ಹೇಳಿದಾಗ ಕೊನೆಗೂ ಆ ಹುಡುಗರು ಎದ್ದರು. ಸೀಟು ಸಿಕ್ಕಾಗ ಇದ್ದ ಖುಷಿ, ಏಳುವಾಗ ಇರಲಿಲ್ಲ. ಇವರಿಗೆ ಸೀಟು ಸಿಕ್ಕಿದ್ದನ್ನು ನೋಡಿ ಕೆಲವರು ಹಾಗೆಯೇ ಮುಖಮುಖ ನೋಡಿಕೊಂಡರು. ತಮ್ಮ ಕೆಲಸದ ಸಮಯವನ್ನು ಕಿತ್ತುಕೊಂಡ ಕಾರಣದ ಬಗ್ಗೆ ಅವರ್ಯಾರು ಚಿಂತಿಸಿದ ಹಾಗೆ ಕಾಣಲಿಲ್ಲ. ಯಥಾಪ್ರಕಾರ ಟ್ರಾಫಿಕ್ ಜಾಮ್ ಇನ್ನು ಹೆಚ್ಚಾಗಿಯೇ ಇತ್ತು. ಅದು ನಿಲ್ಲುವ ಸೂಚನೆ ಕಾಣುತ್ತಿರಲಿಲ್ಲ.

ಸೀನ್ 3: ಓಕುಳಿಪುರಂ, ಹಗಲು/ಮಧ್ಯಾಹ್ನ 2.30
ಕೆಲಸ ಮುಗಿಸಿಕೊಂಡು ಬಸ್ಗಾಗಿ ಕಾದುನಿಂತಿದ್ದೆ. ಮುಷ್ಕರದ ಕಾರಣ ಗೊತ್ತಾಗಿತ್ತು. ನನ್ನ ಪಕ್ಕ ಒಬ್ಬ ವಯಸ್ಸಾದ ಹಿರಿಯರು, ಜೊತೆಗೆ ಅವರ ಶ್ರೀಮತಿ, ಸೊಸೆ ಅಥವಾ ಮಗಳು ಇರಬೇಕು. ಅವರು ನನಗಿಂತ ಮೊದಲೇ ಬಸ್ಗಾಗಿ ಕಾಯುತ್ತಿದ್ದರು ಅನ್ನುವುದಕ್ಕೆ ಅವರ ಮುಖಾರವಿಂದವೇ ಹೇಳುತ್ತಿತ್ತು. ಜೊತೆಗಿದ್ದ ಪುಟ್ಟು ಕೂಸು ಅಳುತ್ತಿತ್ತು. ಸಿಕ್ಕಾಪಟ್ಟೆ ಹಸಿದಿತ್ತು ಅಂತ ಬಿಡಿಸಿ ಹೇಳಬೇಕಾಗಿಲ್ಲ. ಮಗುವಿಗೆ ಎದೆ ಹಾಲು ಕುಡಿಸಲು ತಾಯಿಗೆ ಅದು ಅಂತಹ ಜಾಗವಾಗಿರಲಿಲ್ಲ. ಅವಳಿಗೆ ಮುಜುಗರ. ಏಷ್ಟು ಸಮಾಧಾನ ಮಾಡಿದರೂ ಅದು ಕೇಳುತ್ತಿಲ್ಲ. ಮಗು ಮಾತ್ರ ಅಳುತ್ತಲೇ ಇತ್ತು. ಏಲ್ಲಿ ಕುಡಿಸುವುದು. ಪಾಪ ಆ ಹಸಿಗೂಸಿಗೆ ಆ ದಿನ `ದಿ ಗ್ರೇಟ್ ಬೆಂಗಳೂರು ವಕೀಲರು' ಮುಷ್ಕರ ಮಾಡುತ್ತಿದ್ದಾರೆ ಅಂತ ಗೊತ್ತಿಲ್ಲ. ತನ್ನ ಪಾಡಿಗೆ ಅಮ್ಮ ಹಾಲು ಕುಡಿಸು ಅಂತ ಅಳುತಲಿತ್ತು. ವಯಸ್ಸಾದ ಆ ಹಿರಿಯರಿಗೆ ಇದು ಅರ್ಥವಾದಂತೆ ಕಂಡಿತ್ತು. ಆದರೆ ಅವರು ಆಟೋ ಅಥವಾ ಟ್ಯಾಕ್ಸಿಯಲ್ಲಿ ಹೋಗುವಷ್ಟು ಅನುಕೂಲವಾಗಿರಲಿಲ್ಲ. ತಮ್ಮನ್ನು ಮನೆ ಸೇರಿಸುವ ಬಸ್ಸು ಬರಬಹುದೆಂಬ ಕುಹುಕು ಇನ್ನೂ ಅವರನ್ನು ಕಾಡುತ್ತಿತ್ತು. ಬಸ್ ಇನ್ನೂ ಬರಲಿಲ್ಲ. ಆ ಕಡೆ ಕೆಜಿ ರೋಡಿನಲ್ಲಿ ಮುಷ್ಕರ ನಡೆಯುತ್ತಲೇ ಇತ್ತು. ಮಗುವಿನ ಅಳು ಇನ್ನೂ ಜೋರಾಯಿತು. ಅಮ್ಮನಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಪಕ್ಕದಲ್ಲಿ ನಿಂತಿದ್ದ ನನ್ನಂತ ಸಾಮಾನ್ಯರು ಕೂಡ ಏನು ಮಾಡುವಂತಿರಲಿಲ್ಲ. ಆ ಹಿರಿಯರು ಆಟೋ ಕೂಗಿದರು. ಅಡ್ರೆಸ್ ಹೇಳಿದರು. ಅವ ಆ ಕಡೆ ಸಿಕ್ಕಾಪಟ್ಟೆ ಜಾಮ್... ಬೇರೆ ರೂಟಿಂದ ಹೋಗಬೇಕು, ಇಷ್ಟು ದುಡ್ಡು ಕೊಡಿ ಅಂತ ಕೇಳಿದ. ನಡುವೆ ಚೌಕಾಸಿ ನಡೆಯಿತು. ಆ ಹಿರಿಯರು ತಮ್ಮ ಹೆಂಡತಿ ಮತ್ತು ಮಗಳ ಕಡೆ ನೋಡಿದರು. ಮಗು ಇನ್ನೂ ಜೋರಾಗಿ ಅಳುತಲಿತ್ತು. ಕೊನೆಗೆ ಆ ವಯಸ್ಸಾದ ಹಿರಿಯರೇ ಸೋತರು. ಆಯ್ತಪ್ಪ ನೀ ಹೇಳಿದ ರೇಟಲ್ಲಿ ಹೋಗೋಣ ನಡಿ ಅಂದರು. ಆಟೋದವನ ಮುಖದಲ್ಲಿ ದೊಡ್ಡ ಖುಷಿ. ಮಗಳು ಮೊದಲು ಏರಿದಳು. ನಂತರ ಆ ವಯಸ್ಸಾದ ಹಿರಿಯರು ಕುಳಿತರು. ಸ್ವಲ್ಪ ಹೊತ್ತಾದ ಮೇಲೆ ಮಗು ಅಳುವುದನ್ನು ನಿಲ್ಲಿಸಿತು. ನನ್ನ ಜೊತೆ ಇದ್ದ ಅನೇಕರು ಯಾವುದೋ ಬಸ್ ದೂರದಲ್ಲಿ ಬರುತ್ತಿರುವುದನ್ನು ಕಂಡು, ಒಮ್ಮೆಯೇ ಹತ್ತಿ ಸೀಟು ಹಿಡಿಯುವ ಕಾತುರದಲ್ಲಿದ್ದೇವು.

ಸೀನ್ 4 : ಕೆಆರ್ ಮಾರ್ಕೆಟು  ಟು ಮಾರತಹಳ್ಳಿ, ಹಗಲು/ಸಾಯಂಕಾಲ 6.30

ಮುಷ್ಕರದ ಜ್ವರ ಕಡಿಮೆಯಾದಂತೆ ಕಾಣುತ್ತಿತ್ತು. ಬಸ್ಗಳ ಓಡಾಟದ ಭರಾಟೆ ಜೋರಾಗಿತ್ತು. ನಾನು ಹತ್ತಿದ್ದ ಬಸ್ನಲ್ಲಿ ಜನರಂತೂ ಮೇಲಿಂದ ಮೇಲೆ ಓಡುತ್ತಾ, ಮೈಮೇಲೆ ಬೀಳುತ್ತಿದ್ದರು. ಇಡೀ ಬಸ್ ಕ್ಷಣ ಮಾತ್ರದಲ್ಲಿ ತುಂಬಿತ್ತು. ಕಂಡಕ್ಟರ್ `ರೈಟ್ ರೈಟ್' ಅಂತ ಕೂಗಿದ. ಕಿಟಕಿ ಪಕ್ಕದಲ್ಲಿ ಕುಳಿತಿದ್ದ ನನಗೆ, ಅಲ್ಲಿ ಪುಟ್ಟ ಹುಡುಗ ಸಂಜೆಪತ್ರಿಕೆ ಇಟ್ಟುಕೊಂಡು `ಪೇಪರ್ ಪೇಪರ್... ವಕೀಲರ ಮುಷ್ಕರ..ಕಂಗಾಲಾದ ಬೆಂಗಳೂರು... ಬಿಸಿ ಬಿಸಿ ಸುದ್ದಿ... ಬಿಸಿ ಬಿಸಿ....' ಅಂತ ಕೂಗುತ್ತಿದ್ದ. ಪೇಪರ್ ತೆಗೆದುಕೊಂಡು ಹಾಗೆ ಕಣ್ಣಾಡಿಸಿದೆ. ಪಕ್ಕದಲ್ಲಿದ್ದ ಹಿರಿಯರೊಬ್ಬರು ಆ ಪೇಪರನ್ನು ತುಂಬಾ ಸಿಟ್ಟಿನಿಂದ ನೋಡುತ್ತಿದ್ದರು. ನಾನು ಅವರ ಮುಖ ನೋಡಿದೆ. ನನ್ನ ಜೊತೆ ಮಾತನಾಡಿದರು. `ನೋಡಿ ಇವತ್ತು ನನಗೆ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಕೆಲಸ ಇತ್ತು. ಸಿಕ್ಕಾಪಟ್ಟೆ ಅಜರ್ೆಂಟು ಕೆಲಸ ಅದು. ಕೈಯಲ್ಲಿ ಲಕ್ಷಾಂತರ ಕ್ಯಾಶ್ ಇತ್ತು. ಏನ್ ಮಾಡೋದು ಈ ವಕೀಲರ ಗಲಾಟೆಯಲ್ಲಿ ನಾನು ಸಿಕ್ಕಿಹಾಕಿಕೊಂಡಾಗ ಕೈಯಲ್ಲಿದ್ದ ಕ್ಯಾಶ್ನ ಬ್ಯಾಗು ಕೆಳಗೆ ಬಿದ್ದುಬಿಟ್ಟಿತ್ತು. ಕೆಳಗೆ ನೋಡಿದರೆ ಬ್ಯಾಗ್ ನೆಲದಲ್ಲಿ ಇರಲಿಲ್ಲ. ನನ್ನ ಎದೆ ಧಸ್ಸಂಕ್ಕೆಂದಿತು. ತುಂಬಾ ಕಷ್ಟಪಟ್ಟು ಜೀವನವಿಡೀ ಸಂಪಾದಿಸಿದ ಹಣವದು. ರಿಟೈರ್ ಆಗಿದ್ದೇನೆ, ಇದೆ ನನ್ನ ಜೀವನಕ್ಕೆ ಆಧಾರವಾಗಿತ್ತು. ನನ್ನ ಇಡೀ ಜನುಮದ ಬೆವರು ಆ ಬ್ಯಾಗಿನಲ್ಲಿ ಅಡಗಿತ್ತು. ನೋಡಿದರೆ ಒಂದು ಕ್ಷಣದಲ್ಲಿ ಮಾಯವಾಗಿತ್ತು. ಆ ಕ್ಷಣ ಏಷ್ಟು ಅಳಬೇಕು ಅಂತ ಅರ್ಥವಾಗಲಿಲ್ಲ. ನನ್ನ ದುಃಖದ ಕಟ್ಟೆ ಒಡೆಯಿತು. ಹೆಂಡ್ತಿ ಮಕ್ಕಳು ನೆನಪಾದರು. ಅಲ್ಲಿಯೇ ಕುಸಿದು ಬಿದ್ದೆ. ಹತ್ತಿರದಲ್ಲಿದ್ದ ಪೋಲಿಸರನ್ನು ಹೋಗಿ ಕೇಳಿದೆ. ನನ್ನ ಬ್ಯಾಗು ಕಳಿದಿದೆ, ಹುಡುಕಿಕೊಡಿ ಅಂತ ಕೇಳಿದೆ. `ಅಯ್ಯೋ ನಿಮ್ಮದು ಬರೀ ಬ್ಯಾಗ್ ಅಷ್ಟೇ..! ಇಲ್ಲಿ ಪರ್ಸ್ , ಕ್ಯಾಮೆರಾ, ಶರ್ಟು -ಪ್ಯಾಂಟು ಹರ್ಕೋಂಡವ್ರು ಇದ್ದಾರೆ... ಹೋಗಿ ಹೋಗಿ' ಅಂತ ಹೇಳಿದ. ಆತನಿಗೆ ಬ್ಯಾಗ್ನಲ್ಲಿ ಏನಿತ್ತು ಅಂತ ಮಾತ್ರ ಹೇಳಲಿಲ್ಲ. ಮೈಯೆಲ್ಲಾ ಬೆವತಿತ್ತು. ಈ ಮುಖ ಇಟ್ಕೊಂಡು ಮನೆಗೆ ಹೇಗೆ ಹೋಗಲಿ ಅಂತ ತಲೆಕೆಡಿಸಿಕೊಂಡಿದ್ದೆ. ಯಾರೋ ನನ್ನ ಭುಜ ಮುಟ್ಟಿದಂತಾಗಿತ್ತು. ತಿರುಗಿ ನೋಡಿದೆ, ಯಾವುದೋ ಕಾಲೇಜು ಹುಡುಗ ನನ್ನ ಬ್ಯಾಗನ್ನು ಹಿಡಿದುಕೊಂಡು ನಿಂತಿದ್ದ. ಸರ್ ನಿಮ್ಮ ಬ್ಯಾಗು' ಅಂತ ಹೇಳಿದ. ನನ್ನ ಕಣ್ಣಲ್ಲಿದ್ದ ನೀರು ಆತನಿಗೆ ದೊಡ್ಡ ನಮಸ್ಕಾರವನ್ನು ಹೇಳಿತ್ತು. ನನ್ನ ಹಣೆಬರಹ ಮುಷ್ಕರದ ದಿನ ಗಟ್ಟಿಯಾಗಿತ್ತು. ಬ್ಯಾಗನ್ನು ಎತ್ತಿಕೊಂಡು ಹತ್ತಿರದಲ್ಲಿದ್ದ ಮೈಸೂರು ಬ್ಯಾಂಕಿಗೆ ಹೋಗಿ ಹಣ ಜಮಾ ಮಾಡಿದೆ. ಆ ಕ್ಷಣ ಸಿಕ್ಕ ನೆಮ್ಮದಿಯ ಉಸಿರನ್ನು ಹಿಂದೆ ಯಾವತ್ತು ಉಸಿರಲಿಲ್ಲ. ಮುಂದೆ ಕೂಡ ಉಸಿರುತ್ತೇನೆ ಅಂತ ಗೊತ್ತಿಲ್ಲ' ಅಂತ ನನ್ನ ಮುಖ ನೋಡಿಕೊಂಡು ಹೇಳಿದಾಗ ಅವರ ನೋವಿನ ದನಿ ನನಗೆ ಅರ್ಥವಾಗಿತ್ತು. ಪೇಪರ್ ನೋಡಿಕೊಂಡು ಬಸ್ಗಳತ್ತ ಹಾಗೆ ಕಣ್ಣಾಡಿಸಿದೆ. ಪಾಪದ ಜನರು ಆ ದಿನ ಏನೂ ಆಗಿಲ್ಲವೆಂಬಂತೆ ಓಡಾಡುತ್ತಿದ್ದರು. ಪಕ್ಕದಲ್ಲಿದ್ದ ಆ ವ್ಯಕ್ತಿ ತನ್ನ ಕಥೆ ಹೇಳಿ ನನ್ನ ಭುಜಕ್ಕೆ ಒರಗಿ ಸಣ್ಣಗೆ ತೂಗಡಿಸುತ್ತಿದ್ದರು. `ಅಂತೂ ಮನೆ ಸೇರಿದೆ' ಅನ್ನುವ ನೆಮ್ಮದಿಯಲ್ಲಿ ಒಳಗೆ ಬಂದರೆ ಮನೆಯಲ್ಲೂ ಟೀವಿಯಲ್ಲಿ ಅದೇ ಲಾಯರ್ಗಳ `ಬ್ರೇಕಿಂಗ್ ನ್ಯೂಸ್'. ಮತ್ತೇ ಮೂಡ್ ಆಫ್...!

ಇಡೀ ಊರಿಗೆ ನ್ಯಾಯ ಹೇಳೋ ಜನಗಳಿಗೆ ಬುದ್ದಿ ಹೇಳುವರ್ಯಾರು...?  ಇದು ನಮ್ಮ ಜನರಿಗೆ ಎಂದೂ ಅರ್ಥವಾಗದ ಸಂಗತಿ.

Monday 16 January 2012

ಸಂಗೀತದ ಸಮುದ್ರದಲ್ಲಿ ನಾನೊಂದು ಪುಟ್ಟ ಮೀನು: ಮಾಧುರಿ ಹೆಗಡೆ


ಪ್ರತಿಯೊಬ್ಬರಲ್ಲಿಯೂ ಒಂದಲ್ಲಾ ಒಂದು ಕಲೆ ರಕ್ತಗತವಾಗಿ ಬಂದೇ ಇರುತ್ತದೆ. ಅದನ್ನು ನಾವು ಗುರುತಿಸಿಕೊಳ್ಳಬೇಕಷ್ಟೇ..ಕೆಲವೊಮ್ಮೆ ನಾವೇ ಗುರುತಿಸುತ್ತೇವೆ. ಇನ್ನು ಕೆಲವೊಮ್ಮೆ ನಮ್ಮ ಸಂಸ್ಕಾರದ ಮೂಲಕ ಅದೇ ನಮ್ಮ ಹಿಂದೆ ಬಂದು ಬಿಡುತ್ತದೆ. ಒಲಿದು ಬಂದು ಕಲೆಯನ್ನು  ಉಳಿಸಿಕೊಂಡು ಬೆಳೆಸಿಕೊಂಡು ಹೋಗುವವನು ಸಾಧಕನಾಗುತ್ತಾನೆ, ಇಲ್ಲವೇ ಜೀವನದ ಪರಿಪೂರ್ಣತೆಯನ್ನು ಕಾಣುತ್ತಾನೆ. ಈ ಮಾತಿಗೆ ಬಹಳಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಅದೇ ರೀತಿ ಈಗಿನ ಮಹಿಳೆಯರಿಗೆ ಆದರ್ಶವಾಗುವ ನಿಟ್ಟಿನಲ್ಲಿ ಸಾಧನೆ ಮಾಡುತ್ತಾ ಸಂಗೀತದಲ್ಲಿ ತಮಗೆ ಒಲಿದ ಕಲೆಯನ್ನು ಉಳಿಸಿಕೊಂಡು ಹೋಗುವಲ್ಲಿ ಮಾಧುರಿ ಹೆಗಡೆ ಬೇರೆ ಗೃಹಿಣಿಯರಿಗಿಂತ ವಿಭಿನ್ನವಾಗಿ ನಿಲ್ಲುತ್ತಾರೆ.

`ಅಯ್ಯೋ..ಇನ್ನೇನು ಮದುವೆಯಾಯಿತು..ಮಕ್ಕಳು ಕೂಡ ಆದವು. ಇನ್ಯಾಕೆ ನಾ ಮೊದಲಿನಂತೆ ಹಾಡಬೇಕು, ಗೆಜ್ಜೆ ಕಟ್ಟಿ ಕುಣಿಯಬೇಕು' ಎಂದು ಹೆಚ್ಚಿನ ಮಹಿಳೆಯರು ಮದುವೆಯಾದ ಮೇಲೆ ತಮ್ಮಲ್ಲಿದ್ದ ಪ್ರತಿಭೆಗೆ ಎಳ್ಳುನೀರು ಬಿಡುವವರೇ ಹೆಚ್ಚು. ಬಿಡದೇ ಉಳಿಸಿಕೊಳ್ಳುವವರು ತುಂಬಾ ಬೆರಣಿಕೆಯಷ್ಟು ಮಹಿಳೆಯರು. ತಮ್ಮ ಕುಟುಂಬದಲ್ಲಿ ಯಾರೋಬ್ಬರು ಸಂಗೀತದಲ್ಲಿ ಸಾಧನೆಯನ್ನು ಮಾಡದಿದ್ದರೂ, ಮಾಧುರಿ ಹೆಗಡೆ ಅಪ್ಪಮ್ಮನ ಬೆಂಬಲ ಹಾಗೂ ಸ್ವಇಚ್ಚೆಯಿಂದ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸುವಲ್ಲಿ ಮುನ್ನುಗ್ಗುತ್ತಿದ್ದಾರೆ. ಮಾಧುರಿ ಹೆಗಡೆ ಹುಟ್ಟಿ ಬೆಳೆದುದೆಲ್ಲಾ ದೆಹಲಿಯಲ್ಲಾದರೂ, ಕನ್ನಡ ನಾಸ್ತಿಯನ್ನದೇ, ಸಿರಿಗನ್ನಡಂ ಸದಾ ಆಸ್ತಿಯೆನ್ನುವ ಮನೆಯಲ್ಲಿಯೇ ಬೆಳೆದವರು.  ಇವರ ತಂದೆ ಸುಧಾಕರ್ರವರು ಮಿಲಿಟರಿಯಲ್ಲಿ ಕೆಲಸಮಾಡುತ್ತಿದ್ದರಿಂದ ಬಾಲ್ಯದ ಬಹುಭಾಗ ಕನರ್ಾಟಕದ ಹೊರಭಾಗದಲ್ಲಿಯೇ ಆಯಿತು. ಹಾಗಂತ ಕನ್ನಡವನ್ನು ಮರೆಯದೇ, ಕನ್ನಡ ಓದುವುದನ್ನ, ಬರೆಯುವುದನ್ನ ಮನೆಯಲ್ಲೇ ತಾಯಿ ವಸುಂಧರಾರವರು ಕಲಿಸಿಕೊಟ್ಟರು. ಹಾಗಾಗಿ ದೂರದ ದೆಹಲಿಯಲ್ಲಿ ಬೆಳೆದರೂ ಕನ್ನಡ ಭಾಷೆಯೊಳಗಿನ ನಂಟು ಹಾಗೆಯೇ ಬಾಲ್ಯದ ಗಂಟಾಗಿಯೇ  ಬೆಸೆದುಕೊಂಡಿತು. ಮೊದಲಿನಿಂದಲೂ ಅಪ್ಪಮ್ಮ ಸಂಗೀತದ ಒಡನಾಟದಲ್ಲಿ ಬೆಳೆದುದರಿಂದ, ಸಂಗೀತದ ಜ್ವರ ಇನ್ನು ಸ್ಕೂಲ್ನಲ್ಲಿ ಓದುತ್ತಿದ್ದ ಮಾಧುರಿಯನ್ನ ಸೆಳೆಯಲಿಕ್ಕೆ ಬಹಳ ದಿನ ತೆಗೆದುಕೊಳ್ಳಲಿಲ್ಲ. ಆಗಿನ ದಿನಗಳಲ್ಲಿ ನವದೆಹಲಿಯ ಪ್ರಸಿದ್ದ ಸಂಗೀತ ಆಕಾಡಿಮೆ ಗಂಧರ್ವ ಮಹಾವಿದ್ಯಾಲಯದಲ್ಲಿ ಸಂಗೀತ ಅಭ್ಯಾಸ ಮಾಡುವ ಅವಕಾಶ ಮಾಧುರಿಗೆ ಸಿಕ್ಕಿತು. ವಿದ್ಯಾಲಯಕ್ಕೆ ಆಗ ವಿನಯಚಂದ್ರ ಮೊದ್ಗಲ್ ಪ್ರಿನ್ಸಿಪಾಲ್ರಾಗಿದ್ದರು. ಹಿಂದುಸ್ಥಾನಿ ಸಂಗೀತದಲ್ಲಿ ಪ್ರಾವೀಣ್ಯತೆ ಹಾಗೂ ಸಾಧನೆ ಮಾಡಿದಂತಹ ಘಟಾನುಘಟಿಗಳು ವಿದ್ಯಾಲಯದಲ್ಲಿ ಪಾಠವನ್ನು ತೆಗೆದುಕೊಳ್ಳುತ್ತಿದ್ದರು.
`ಇಂದಿಗೂ ವಿದ್ಯಾಲಯದಲ್ಲಿ ಸಿಕ್ಕಿದಂತಹ ಹಿಂದುಸ್ತಾನಿ ಸಂಗೀತದ ಫೌಂಡೇಷನ್ ನನಗೆ ಇಲ್ಲಿಯವರಗೆ ತುಂಬಾ ಸಹಾಯ ಮಾಡಿದೆ. ಈ ವಿಷಯದಲ್ಲಿ ನನ್ನ ಗುರುಗಳಾಗಿದ್ದ ಐ.ಎಸ್.ಬಾವ್ರಾ, ಈಗಿನ ಪ್ರಿನ್ಸಿಪಾಲ್ ಮಧು ಮೊದ್ಗಲ್ರವರನ್ನ ಸದಾ ನೆನಪಿಸಿಕೊಳ್ಳುತ್ತೇನೆ'ಎನ್ನುತ್ತಾರೆ ಮಾಧುರಿ ಹೆಗಡೆ. ನವದೆಹಲಿ ಇವರ ಸಂಗೀತದ ಆಯಾಮದ ಪಯಣಕ್ಕೆ ಒಂದು ಉತ್ತಮ ನೆಲೆಯನ್ನು ಒದಗಿಸಿದಿಯಂತೆ. ಬಿಎ ಡಿಗ್ರಿ ಜೊತೆಗೆ ಸಂಗೀತದಲ್ಲಿ ಪದವಿಯನ್ನು ಪಡೆದ ಮೇಲೆ ಮಾಧುರಿಯವರು ಸಂಗೀತದ ಕಡೆ ಹೆಚ್ಚೆಚ್ಚು ತಮ್ಮನ್ನು ತೊಡಗಿಸಿಕೊಂಡರು. ಅದರಲ್ಲೂ ಪ್ರತಿವರ್ಷ ಗಂಧರ್ವ ವಿದ್ಯಾಲಯದ ವಾಷರ್ಿಕ ಕಾರ್ಯಕ್ರಮಗಳಲ್ಲಿ, ವಿಷ್ಣು ದಿಗಂಬರ್ರವರ ನಾಮಸ್ಮರಣೆಯ ಕಾರ್ಯಕ್ರಮಗಳಲ್ಲಿ  ತಪ್ಪದೇ ಕಛೇರಿ ಕೊಡುತ್ತಿದ್ದರು.ಅಂದಿನಿಂದ ಇಂದಿನವರೆಗೆ ಸಾಂಸ್ಕೃತಿಕವಾಗಿ ತುಂಬಾ ಬಲಿಷ್ಟವಾಗಿರುವ ದೆಹಲಿ ಕನ್ನಡ ಸಂಘ ಅನೇಕ ಕನ್ನಡ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿತ್ತು. ಚಿಕ್ಕವರಾಗಿನಿಂದಲೂ ಮಾಧುರಿ ದೆಹಲಿ ಕನ್ನಡ ಸಂಘದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು,ಜೊತೆಗೆ ಅಷ್ಟೇ ಪ್ರಮುಖವಾಗಿ ತಮ್ಮ ಸಂಗೀತ ಕಾರ್ಯಕ್ರಮದ ಮೂಲಕ ಎಲ್ಲರ ಮನಗೆದ್ದಿದ್ದರೂ ಕೂಡ. ಇದರ ಜೊತೆಗೆ ಅನೇಕ ರೇಡಿಯೋ ಜಿಂಗಲ್ಸ್ಗಳು, ಆಕರ್ೆಸ್ಟ್ರಾಗಳಲ್ಲಿ,ದೆಹಲಿ ಆಕಾಶವಾಣಿಯ ನಿರೂಪಕಿಯಾಗಿ, ಕಾರ್ಯಕ್ರಮಗಳಿಗೆ ಹಿನ್ನೆಲೆಧ್ವನಿ ನೀಡುತ್ತಾ ಮಾಧ್ಯಮವಾಣಿಯಲ್ಲಿ ತಮ್ಮ ಧ್ವನಿ ಪರಿಚಯದ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.

ದೆಹಲಿ ಟು ಬೆಂಗಳೂರು...!
ಸಂಗೀತ ಸಾಧನೆಗೆ ಮಿತಿಯಿಲ್ಲ, ದಿನನಿತ್ಯ ಕಲಿಕೆ ಇಲ್ಲಿ ಇದ್ದದ್ದೇ. ಇದೊಂಥರ ಸಮುದ್ರವಿದ್ದ ಹಾಗೆ, ಎನ್ನುವ ಮಾಧುರಿ ಹೆಗಡೆ ಇಲ್ಲಿಯವರೆಗೆ ಈ ಸಮುದ್ರದಲ್ಲಿ ತಕ್ಕಮಟ್ಟಿಗೆ ಸಾಧನೆ ಮಾಡಲಿಕ್ಕೆ ಸಹಾಯ ಮಾಡಿದಂತಹ ಎಲ್ಲರನ್ನು ವಿನಯಪೂರ್ವಕವಾಗಿ ನೆನೆಪಿಸಿಕೊಳ್ಳುತ್ತಾರೆ, ಅದರಲ್ಲಿ ಮುಖ್ಯವಾಗಿ ಅವರು ನೆನೆಸುವುದು ಅವರ ಪತಿ ಲಕ್ಷ್ಮಿನಾರಾಯಣ ಹೆಗಡೆಯವರನ್ನ. `ನನ್ನ ಮದುವೆಯ ನಂತರವೇ ನನಗೆ ಹೆಚ್ಚು ಬೆಳೆಯಲಿಕ್ಕೆ ಅವಕಾಶ ಸಿಕ್ಕಿತು. ಇದರ ಹಿಂದೆ ನಮ್ಮ ಯಜಮಾನ್ರು ತುಂಬಾನೇ ಸಹಾಯ ಮಾಡಿದಾರೆ ಎನ್ನುತ್ತಾರೆ' ಮಾಧುರಿಹೆಗಡೆ.  ಸದ್ಯ ಕನ್ನಡ ಖಾಸಗಿ ವಾಹಿನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಲಕ್ಷ್ಮಿನಾರಾಯಣ ಹೆಗಡೆ ಮೊದಲಿನಿಂದಲೂ ಉತ್ತಮ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರಂತೆ. ಏನೇ ತಪ್ಪುಗಳಿದ್ದರೂ ತಿದ್ದಿಕೊಳ್ಳಲು ಸಲಹೆ ನೀಡುತ್ತಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇವರಿಗೆ ಬೆಂಗಳೂರಿಗೆ ವರ್ಗವಾದ ಮೇಲೆ ಕನ್ನಡ ವಾಹಿನಿಗಳಲ್ಲಿ, ಲೈವ್ ಪ್ರೋಗ್ರಾಂಗಳಲ್ಲಿ, ಸೀರಿಯಲ್ಗಳಲ್ಲಿ ಆಕ್ಟಿಂಗ್,  ರೇಡಿಯೋ ಜಿಂಗಲ್ಸ್ಗಳ ಗಾಯನ ಹೀಗೆ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಬೆಂಗಳೂರು ವಾತಾವರಣ ಮಾಧುರಿ ಹೆಗಡೆಯವರಿಗೆ ತುಂಬಾ ಸಹಾಯ ಮಾಡಿದಿಯಂತೆ. ಇಲ್ಲಿಗೆ ಬಂದ ಮೇಲೆ ಹಿಂದುಸ್ತಾನಿಯ ಹೊರತಾಗಿ ಸುಗಮ ಸಂಗೀತದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸದ್ಯ ಮೃತ್ಯುಂಜಯ್ ದೊಡ್ಡವಾಡರವರ ಸುಗಮ ಸಂಗೀತದ ಟ್ರೂಪ್ನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಝೀಕನ್ನಡದ ಎಸ್ಸೆಲ್ ಅವಾಡ್ಸರ್್ ಕಾರ್ಯಕ್ರಮ, ಹಾಡುಹಬ್ಬ ಇನ್ನು ಹಲವು ಲೈವ್ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ.
  ಸಂಗೀತದ ಎಲ್ಲ ಪ್ರ್ರಾಕಾರಗಳು ನನಗಿಷ್ಟ.. ಇಂತಹುದೇ ಸಂಗೀತಕ್ಕೆ ನಾನು ಎಂದಿಗೂ ಬದ್ದನಾಗಿಲ್ಲ. ಎಲ್ಲ ರೀತಿಯ ಹಾಡುಗಳನ್ನ ಹಾಡಲಿಕ್ಕೆ ನಾನು ಇಷ್ಟಪಡುತ್ತೇನೆ.ವಿಶೇಷವಾಗಿ ಮಾಧುರ್ಯಕ್ಕೆ ಜಾಸ್ತಿ ಒತ್ತು ಕೊಡುತ್ತೇನೆ. ಭೀಮಸೇನ್ ಜೋಷಿ, ಲತಾಮಂಗೇಷ್ಕರ್,ಕಿಶೋರ್ ಕುಮಾರ್ ಹಾಡುಗಳೆಂದರೆ ಪಂಚಪ್ರಾಣ, ಆರ್ಡಿ ಬರ್ಮನ್ ಸಂಗೀತಕ್ಕೆ ತಲೆಬಾಗಬೇಕೆಸಿಸುತ್ತದೆ. ಕನ್ನಡದಲ್ಲಿ ರಾಜನ್-ನಾಗೇಂದ್ರ ಸಂಯೋಜನೆಯ ಮೇಲೋಡಿ ಹಾಡುಗಳನ್ನು ಸದಾ ಗುನುಗಬೇಕೆನಿಸುತ್ತದೆ. ಇವೆಲ್ಲಾ ಇವರ ಸಂಗೀತ ಅಭಿರುಚಿಯ ಮನದಾಳದ ಮಾತುಗಳು. ತಮ್ಮಂತೆ ತಮ್ಮ ಮಗಳನ್ನು ಯಾವುದಾದರೂ ಒಂದು ಕ್ಷೇತ್ರದಲ್ಲಿ ದೊಡ್ಡ ಸಾಧಕಿಯನ್ನಾಗಿ ಮಾಡುವ ತವಕ ಹಾಗೂ ಗುರಿ ಮಾಧುರಿಯವರದು. ಮಗಳು ನಿಶಾ ಹೆಗಡೆ ಈಗಾಗಲೇ ನೃತ್ಯದ ಕಡೆ ಹೆಚ್ಚು ಗಮನಹರಿಸಿದ್ದಾಳಂತೆ. ಭರತನಾಟ್ಯಂ, ಕಥಕ್ ಕಲೆಯನ್ನ ತುಂಬಾ ಗಂಭೀರವಾಗಿ ಕಲಿಯುತ್ತಿದ್ದಾಳೆ. ನನ್ನ ಹಾಗೂ ನಮ್ಮ ಯಜಮಾನರ ಸಪೋರ್ಟ ಅವಳಿಗೆ ಇದ್ದೇ ಇರುತ್ತೆ. ಅವಳ ಸಾಧನೆಯ ದಿನಗಳನ್ನು ನೋಡುವ ದಿನಗಳು ಬರಬೇಕಷ್ಟೇ..!










Friday 13 January 2012

ಮಗು ಮಲಗಿದೆ...!



ಮಗು ಮಲಗಿದೆ, ಎಬ್ಬಿಸಬೇಡಿ
ಗಲಾಟೆ ಮಾಡಬೇಡಿ...

ಕೂಸು ನಿದ್ದೆಗೆ ಜಾರಿದೆ, ಅಮ್ಮನ ಹಾಲುಂಡು.
ಸದ್ಯ ಕನಸಿನ ಮನೆಗೆ ಹೋಗಿರಬಹುದು...
ಮಗು ಏನು ಕನಸು ಕಾಣುತ್ತಿರಬಹುದು?
ಕಂಡವರಾರು? ನೋಡಿದರಾರು?
ಮಗುವಿನ ಕನಸಿನಲ್ಲಿ ದೇವರು ಬಂದಿರಬಹುದು
ದೇವರ ಜೊತೆ ಮಗು ಮಾತನಾಡುತ್ತಿರಬಹುದು...!
ಏನು ಮಾತನಾಡುತ್ತಿರಬಹುದು?
ಮಾತನಾಡಿದ್ದು ನಮಗೆ ಅರ್ಥವಾದೀತೇ?
ಅದು ದೇವರ ಭಾಷೆ... ಮಕ್ಕಳು ದೇವರ ಸಮಾನರಲ್ಲವೇ?
ಮಗು ಮಲಗಿದೆ, ಎಬ್ಬಿಸಬೇಡಿ
ಗಲಾಟೆ ಮಾಡಬೇಡಿ...

ಮಗುವಿಗೆ ಆಟ ಅಂದರೆ ಬಲು ಇಷ್ಟ.
ಅಮ್ಮನ ಮಡಿಲಲ್ಲಿ ಒದ್ದಾಡಿ, ಅಮೃತದ ಕುಡಿಯನ್ನು ಹೀರಿ...
ಅವಳ ಕೂದಲು, ತಾಳಿಯನೆಳೆದು, ಹೊಟ್ಟೆಗೆ ರಪರಪನೇ ಒದ್ದು,
ಅಮ್ಮನ ಸೀರೆ ಎಳೆವ ಮಗು
ಇನ್ನು ದೇವರನ್ನು ಸುಮ್ಮನೇ ಬಿಟ್ಟಿತೇ?
ಅಲ್ಲಿಯೂ ದೇವರಿಗೆ ಅದೇ ಕಾಟ ಕೊಟ್ಟಿರಬಹುದು...
ಮಗುವಿನ ಕಾಟ ತಾಳಲಾರದೇ, ದೇವರು ಮಗುವನ್ನು
ತೊಟ್ಟಿಲಲ್ಲಿ ತೂಗಿರಬೇಕು, ಅದು ಹಾಗೆಯೇ
ಅವನ ಮಡಿಲಲ್ಲಿ ಮಲಗಿರಬೇಕು, ವಿರಮಿಸಿರಬೇಕು.
ಮಗು ಮಲಗಿದೆ, ಎಬ್ಬಿಸಬೇಡಿ
ಗಲಾಟೆ ಮಾಡಬೇಡಿ...

ಮಗು ಎದ್ದಿದೆ...ಅಳುತಿದೆ.
ಮತ್ತೆ ಅಮ್ಮನ ಮಡಿಲ ಸೇರಿದೆ. 
ಕನಸಿನ ದೇವರನು ನೋಡಿದೆ.
ಈಗ ಇನ್ನೊಂದು ದೇವರ ಜೊತೆ ಮಾತನಾಡುತಿಹುದು
ಆಟವಾಡುತಿದೆ.
ಮಗು ಎದ್ದಿದೆ, ಗಲಾಟೆ ಮಾಡಬೇಡಿ

Photo Feautre : Panchami (my sister daughter)

Thursday 12 January 2012

ಪಂಚಮಿ ಪಬ್ಲಿಕೇಷನ್ಸ್ ನ ಮೊದಲ ಕಾಣಿಕೆ `ಕಲಾವಿದರ ಕಥಾನಕ' ಹೊತ್ತಿಗೆಯನ್ನು  ಕೆಲವು ದಿನಗಳ ಹಿಂದೆ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯರವರು ಲೋಕಾರ್ಪಣೆ ಮಾಡಿದರು.  ನಮ್ಮ ಸಂಸ್ಥೆಯ ಮೊದಲ ಕೃತಿಯನ್ನು ಈ ಇಬ್ಬರೂ ಮಹಾನುಭಾವರಿಂದ ಬಿಡುಗಡೆಯಾಗುತ್ತದೆ ಅಂತ ನಾನಂತೂ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಎಲ್ಲವೂ ಒಂದು ಪ್ರಾಮಾಣಿಕ ಪ್ರಯತ್ನದ ಫಲ ಎಂದು ಕರೆಯಲಿಕ್ಕೆ ಇಷ್ಟಪಡುತ್ತೇನೆ.  ಈ ಕಾರ್ಯಕ್ರಮಕ್ಕೆ ಮುಖ್ಯವಾಗಿ  ಜೊತೆಯಾದ ನನ್ನ ಸ್ನೇಹಿತರಾದ ಆರ್ ಎನ್ ಜಗನ್ನಾಥ್, ಪ್ರಭುರಾಜ್ , ಮಹದೇವ್, ಮಧು ಇನ್ನು ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜೊತೆಯಾಗಿ ಎಲ್ಲ ರೀತಿಯಿಂದಲೂ ಸಹಕಾರ ನೀಡಿದ್ದರು. ಪ್ರಾಧಿಕಾರ ಹಮ್ಮಿಕೊಂಡಿದ್ದ ಪುಸ್ತಕಮೇಳದಲ್ಲಿ  ನಮ್ಮ ಕೃತಿಯನ್ನು ಬಿಡುಗಡೆ ಮಾಡಲಿಕ್ಕೆ ಅನುಕೂಲವನ್ನು ಮಾಡಿಕೊಟ್ಟವರು ಪ್ರಾಧಿಕಾರದ ಹಿರಿಯ ಕೆಎಎಸ್ ಅಧಿಕಾರಿ ಬಿ.ಹೆಚ್. ಮಲ್ಲಿಕಾರ್ಜುನ್ ಕೊನೆಯವರೆಗೂ ಸಾಥ್ ನೀಡಿ ಬೆಂಬಲ ನೀಡಿದ್ದರು.
 
 ಮೊದಲಿನಿಂದಲೂ  ಈ ಪುಸ್ತಕವನ್ನು ಮಾಡಲು ಬೆಂಬಲ ಮಾಡುತ್ತಾ ಬಂದವರು ನನ್ನ  ಆತ್ಮೀಯ ಲೇಖಕರಾಗಿರುವ ಕಗ್ಗರೆ ಪ್ರಕಾಶ್ ಅವರ ಸಹಕಾರವನ್ನು ಸದಾ ನೆನೆಯಲೇಬೇಕು.
 
 
 
 
 
 
 
 
 
 
 
ಪುಸ್ತಕ ಬಿಡುಗಡೆಯ ದಿನದ ಕೆಲವು ಪೋಟೋ ಕ್ಷಣಗಳು

Sunday 8 January 2012

ನಾನು ಡುಮ್ಮಿ ಅಂತ ಗೊತ್ತು ನನಗೆ : ಮಾಲಾಶ್ರೀ

ಮಾಲಾಶ್ರೀಯವರ ಜೊತೆ 5 ನಿಮಿಷ ಮಾತನಾಡಬೇಕು ಅಂತ ಅಂದುಕೊಂಡು ಅವರ ಅಪಾಯಿಂಟ್ಮೆಂಟ್ ತೆಗೆದುಕೊಂಡು ಮಾತನಾಡಲು ಶುರುಮಾಡಿದ್ದೆ.
ಅವರ ಹಾಗೂ ನನ್ನ ಮಾತುಕತೆ ಮುಗಿಯುವ ಹೊತ್ತಿಗೆ ಮುಕ್ಕಾಲು ತಾಸು ಕಳೆದಿತ್ತು. ಶಕ್ತಿ ಸಿನಿಮಾದ  ರಿಲೀಸ್ ಟೈಮಲ್ಲಿ ಮಾಲಾಶ್ರೀ ಸಿಕ್ಕಾಪಟ್ಟೆ ಬ್ಯೂಸಿ ಆಗಿದ್ದರೂ, ಸುಮಾರು ಹೊತ್ತು  ತಮ್ಮ ಜೀವನದ ಬಗ್ಗೆ, ಕನ್ನಡ ಒಂದಕ್ಷರ ಗೊತ್ತಿಲ್ಲದೇ ಕರ್ನಾಟಕಕ್ಕೆ ಬಂದದ್ದು, ರಾಜ್ಕುಮಾರ್ ಫ್ಯಾಮಿಲಿಗೆ ಹತ್ತಿರವಾಗಿದ್ದು, ಚಿ.ಉದಯಶಂಕರ್ರಿಂದ ಕನ್ನಡ  ಬರೆಯಲು, ಓದಲು ಕಲಿತದ್ದು, ಮಾಡಿದ ಸಿನಿಮಾಗಳು, ಕನಸಿನ ರಾಣಿ ಪಟ್ಟದಿಂದ, ಲೇಡಿ ಬಾಂಡ್ ಪಟ್ಟಕ್ಕೆ ಜಿಗಿದದ್ದು, ಈ ನಡುವೆ ಮದುವೆ, ಮಕ್ಕಳು, ಸಂಸಾರ ಎಲ್ಲದರ ನಡುವೆ ಮತ್ತೇ ಸಿನಿಮಾ..! ಮದುವೆಯಾದ ಮೇಲೆ ರಿಸ್ಕು ತೆಗೆದುಕೊಳ್ಳಬಾರದು ಅಂತ ಹೇಳುತ್ತಾರೆ, ಆದರೆ ಮಾಲಾಶ್ರೀ ರಿಸ್ಕು ತೆಗೆದುಕೊಳ್ಳೊದ್ರಲ್ಲಿ ತುಂಬ ಖುಷಿ ಇದೆ ಅಂತ ಹೇಳುತ್ತಾರೆ. ನಾನು ದಪ್ಪ ಇದೀನಿ ಅಂತ ನನಗೆ ಗೊತ್ತು..ಡಯಟ್-ಗಿಯಟ್ ಮಾಡೋದು ತುಂಬಾ ಕಡಿಮೆ. ತಿನ್ನೊದಂದ್ರೆ ತುಂಬಾ ಇಷ್ಟ. ಆದರೂ ಸಿನಿಮಾಗೊಸ್ಕರ ತಿನ್ನೊದನ್ನು ಕಡಿಮೆ ಮಾಡಿದೀನಿ..ಸಿನಿಮಾ ಮುಗಿದ ಮೇಲೆ ಮತ್ತೇ ತಿನ್ನಲಿಕ್ಕೆ ಪ್ರಾರಂಭಿಸ್ತೀನಿ..'
ಅವರ ಜೊತೆ ಮಾತನಾಡಿದಾಗ, ಅವರು ಮಾತನಾಡಿದ್ದಕ್ಕಿಂತ ಹೆಚ್ಚಾಗಿ ನಕ್ಕಿದ್ದೆ ಜಾಸ್ತಿ.. ಅವರ ನಗುವಿನಲ್ಲೂ ಅನುಭವದ ಬುತ್ತಿ...  `ಶಕ್ತಿ' ಸಿನಿಮಾದ ಬಗ್ಗೆ ಮಾಲಾಶ್ರೀ ಮಾತನಾಡಿದ್ದು ಹೀಗಿತ್ತು....

`ಚಾಮುಂಡಿ', `ದುರ್ಗಾ,  `ಕನ್ನಡದ ಕಿರಣ್ಬೇಡಿ' ಹೀಗೆ ಯಶಸ್ವಿ ಕನ್ನಡ ಚಿತ್ರಗಳಲ್ಲಿ `ಲೇಡಿಬಾಂಡ್ ಆ್ಯಕ್ಷನ್ ಪಾತ್ರಗಳ ಮೂಲಕ ಅಭಿನಯಿಸಿ ಮನಗೆದ್ದ `ಕನಸಿನ ರಾಣಿ' ಮಾಲಾಶ್ರೀ ಅವರು ಈಗ ಮತ್ತೊಮ್ಮೆ ರಾಮುವಿನ `ಶಕ್ತಿ'ಯಾಗಿ ಹೊರಹೊಮ್ಮುತ್ತಿದ್ದಾರೆ. ಮಾಲಾಶ್ರೀಯವರ `ಕನಸಿನ ಪರ್ವ ಮುಗಿದು `ಆ್ಯಕ್ಷನ್ ಮೇನಿಯಾ' ಪ್ರಾರಂಭವಾಗಿ ಈಗಾಗಲೇ ಒಂದೂವರೆ ದಶಕವಾಗಿದೆ. ಇಂದಿಗೂ ಕನ್ನಡದಲ್ಲಿ ಆ್ಯಕ್ಷನ್ ಹಿರೋಯಿನ್ ಅಂದರೆ ಅದು ಮಾಲಾಶ್ರೀಯೇ. ಎಸ್.ಪಿ. ಭಾರ್ಗವಿ, ಲೇಡಿ ಕಮಿಷನರ್ನಿಂದ ಹಿಡಿದು ಇಂದಿನ `ಶಕ್ತಿ'ವರೆಗೆ ಮಾಲಾಶ್ರೀಯವರು ಮಾಡಿದ ಎಲ್ಲ ರೋಲ್ಗಳನ್ನೂ ನೋಡಿದರೆ ಗಂಡೆದೆಗಳು ಕೂಡ ನಾಚಿಸುವಂತಿದೆ. ಕನ್ನಡದ `ಲೇಡಿಬಾಂಡ್ ಚಿತ್ರಗಳಲ್ಲಿ ಮಾಲಾಶ್ರೀ ಎಂದೆಂದಿಗೂ ದೊಡ್ಡ ಮೈಲಿಗಲ್ಲು.

ಡಬ್ಬಿಂಗ್ ಮಾಡಿದ್ದೇ ದೊಡ್ಡ ಸಾಹಸ : ಮಾಲಾಶ್ರೀ

 ಶಕ್ತಿಯ ಪಾತ್ರದ ಬಗ್ಗೆ ತಿಳಿಸಿ?ಈ ಸಿನಿಮಾವನ್ನು `ಡಿಫರೆಂಟ್ ಅಂತ ಹೇಳೋದೆ ಡಿಫರೆಂಟ್! ...ಹಹಹ.... ತುಂಬಾ ಚೆನ್ನಾಗಿತ್ತು ನಾನು ನಿರ್ವಹಿಸಿದ ಪಾತ್ರ. ನಾವು ಅಂದುಕೊಂಡಿರಲಿಲ್ಲ ಈ ಸಿನಿಮಾದ ಎಳೆ ಇಷ್ಟು ಬೇಗ ಸಿನಿಮಾ ಆಗುತ್ತೆ ಅಂತ. ಇವತ್ತಿನ ಟೈಮಲ್ಲಿ ಗಾಂಧಿಮಂತ್ರ ಜಪಿಸುತ್ತಾ ಕೂತರೆ ಅನ್ಯಾಯದ ವಿರುದ್ಧ ಹೋರಾಡೋಕೆ ಖಂಡಿತ ಆಗೋಲ್ಲ. ಏನಿದ್ದರೂ ಸುಭಾಶ್ಚಂದ್ರ ಬೋಸ್ ಪಾಲಿಸಿ. ದಂಡಂದಶಗುಣಂ ಅಂತ ಜಪಿಸುವುದೇ ಶಕ್ತಿಯ ಮಂತ್ರ. ಮೋಸ, ಭ್ರಷ್ಟಾಚಾರ, ಅನ್ಯಾಯ ಮಾಡುವರನ್ನು ಚೆನ್ನಾಗಿ ಬಾರಿಸುತ್ತ್ತಿರುತ್ತಾಳೆ. ನನ್ನ ಡೈಲಾಗ್ಗಳು ಕೂಡ ತುಂಬಾ ಚೆನ್ನಾಗಿವೆ. ಒಂದು ಡೈಲಾಗೆ ಹೇಳೋದಾದ್ರೆ `ನಮ್ಮ ಬೆವರಿನಿಂದ ಅನ್ನವನ್ನು ಬೇಯಿಸಿಕೊಳ್ಳಬೇಕು,, ಬೇರೆಯವರ ರಕ್ತದಿಂದಲ್ಲ!' ಈ ತರಹದ ಪವರ್ಫುಲ್ ಡೈಲಾಗ್ಸ್ಗಳು ಬಹಳಷ್ಟಿವೆ. ಶಕ್ತಿಯ ಕಥೆಯಲ್ಲೆ ಅಷ್ಟು ಪವರ್ ಇದೆ. ನನ್ನ ಪಾತ್ರವನ್ನು ಹೇಳುವುದಕ್ಕಿಂತ ಚಿತ್ರದಲ್ಲಿ ನೋಡಿ ಆನಂದಿಸಬೇಕು.
`ಶಕ್ತಿ' ಸಿನಿಮಾದ ಪೂರ್ವತಯಾರಿ ಹೇಗಿತ್ತು? ಪ್ರತಿ ಸಿನಿಮಾ ಮಾಡುವಾಗಲೂ ನನ್ನ ಮೊದಲ ತಯಾರಿ ನನ್ನ ವೇಟನ್ನ ಕಡಿಮೆ ಮಾಡೋದು. ನನಗೆ ಒಳ್ಳೆ ಊಟ ಮಾಡೋದು ಅಂದ್ರೆ ತುಂಬಾ ಇಷ್ಟ. ಆದರೆ ಏನು ಸಿನಿಮಾ ಮಾಡೋ ಮುಂಚೆ ಸ್ವಲ್ಪ ಡಯಟಿಂಗ್ ಮಾಡ್ತೀನಿ. ಡೇಲಿ ಮಾಡೋ ವಕರ್ೌಟ್ಗಿಂತ 2-3 ತಾಸು ಜಾಸ್ತಿನೇ ವ್ಯಾಯಾಮ ಮಾಡ್ತೀನಿ. ಆದರೆ ಈ ಬಾರಿ ಇದೇ ರೀತಿ ದೇಹಕ್ಕೆ ವ್ಯಾಯಾಮ ಕೊಟ್ಟಷ್ಟೇ ನನ್ನ ಧ್ವನಿಗೂ ವ್ಯಾಯಾಮ ಕೊಟ್ಟೆ. ನನ್ನ ವಾಯ್ಸ್ ಮಾಡುಲೇಷನ್ ಪ್ರಾಕ್ಟೀಸ್ ಮಾಡಿದೆ. ಏಕೆಂದರೆ  ಶಕ್ತಿ ನಿಜವಾಗ್ಲೂ ವೆರಿ ಪವರ್ಫುಲ್ ಕ್ಯಾರೆಕ್ಟರ್! ಅವಳು ತುಂಬಾ ಜೋರಾಗಿ ಮಾತನಾಡುತ್ತಾಳೆ. ಮಾತಿನಲ್ಲೆ ಎದುರಿಗಿದ್ದ ವಿಲನ್ಗಳ ಗುಂಡಿಗೆಯನ್ನು ಅದರುಸುತ್ತಾಳೆ. ಹಾಗಾಗಿ ನನ್ನ ಧ್ವನಿಗೆ ಸ್ವಲ್ಪ ಎಕ್ಸರ್ಸೈಜ್ ಕೊಟ್ಟೆ.

ಚಿತ್ರದಲ್ಲಿ ಹೊಸತನವೇನಾದರೂ ಇದೆಯಾ?
ಇಷ್ಟು ವರ್ಷ ಇಂಡಸ್ಟ್ರಿಯಲ್ಲಿ ಇದೀನಿ. ಬಹಳಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದೀನಿ. ನನ್ನ ಯಾವ ಪಾತ್ರಕ್ಕೂ ಇದುವರೆಗೂ  ಡಬ್ಬಿಂಗ್ ಮಾಡಿರಲಿಲ್ಲ. ಆರಂಭದಲ್ಲಿ ಕನ್ನಡ ಗೊತ್ತಿರಲಿಲ್ಲ ಅನ್ನುವುದಕ್ಕಿಂತ ನನ್ನ ಧ್ವನಿ ನಾನು ಮಾಡುತ್ತಿದ್ದ ಪಾತ್ರಕ್ಕೆ ಸೂಟ್ ಆಗ್ತಿರಲಿಲ್ಲ. ಒಳ್ಳೆ ಮಗು ಥರ ಇತ್ತು ನನ್ನ ವಾಯ್ಸ್! ಹಾಗಾಗಿ ಡಬ್ಬಿಂಗ್ ಮಾಡೋಕೆ ಆಗ್ತಿರಲಿಲ್ಲ. ಆದರೆ ಈ ಸಿನಿಮಾ ಮಾಡುವಾಗ ನನ್ನ ಧ್ವನಿ ಈಗ ಸ್ವಲ್ಪ ಬದಲಾವಣೆ ಆಗಿತ್ತು. ಡಬ್ಬಿಂಗ್ ಮಾಡಬಹುದು ಅಂತ ಅನಿಸಿತ್ತು. ಇಂದು ಕನ್ನಡವನ್ನು ಸ್ಪಷ್ಟವಾಗಿ ಓದುತ್ತೇನೆ, ಮಾತಾಡಬಲ್ಲೇ, ಕನ್ನಡವನ್ನ ಚೆನ್ನಾಗಿ ಬರೆಯಬಲ್ಲೆ. ಹಾಗಾಗಿ ರಾಮುರವರೇ ಈ ಸಿನಿಮಾ ಮಾಡುವಾಗ ಹೇಳಿದ್ರು. ಈ ಪಾತ್ರಕ್ಕೆ ನೀನೇ ಡಬ್ ಮಾಡು. ನಿನಗೆ ಈ ಪಾತ್ರಕ್ಕೆ ಬೇಕಾದ ವಾಯ್ಸ್ ಈಗಿದೆ, ಡಬ್ಬಿಂಗ್ ಮಾಡು ಅಂತ ಸಪೆೋಟರ್್ ಮಾಡಿದ್ರು. ಡಬ್ಬಿಂಗ್ ಮಾಡೋಕೆ ಒಪ್ಕೊಂಡೆೆ. ನಂಗೊತ್ತಿರಲಿಲ್ಲ ಡಬ್ಬಿಂಗ್ ಇಷ್ಟು ಕಷ್ಟ ಅಂತ. ಮೊದಲೆಲ್ಲ ನನ್ನ ಪಾತ್ರಕ್ಕೆ ಸರ್ವಮಂಗಳ ಡಬ್ಬಿಂಗ್ ಮಾಡ್ತಿದ್ರು, ಅವರ ನಂತರ ಶಶಿಕಲಾ ದನಿ ಕೊಟ್ರು. ಸರ್ವಮಂಗಳ ಡಬ್ಬಿಂಗ್ ಮಾಡೋವಾಗ ನಾನು ಸ್ಟುಡಿಯೋದಲ್ಲಿ ಕುಳಿತು ಅವರು ಡಬ್ಬಿಂಗ್ ಮಾಡೋದನ್ನು ನೋಡುತ್ತಿದ್ದೆ.  ತುಂಬಾ ಕಷ್ಟಪಟ್ಟು ಡಬ್ಬಿಂಗ್ ಮಾಡೋರು. ಆವಾಗಲೇ ಗೊತ್ತಾಗಿದ್ದು ಆಯಾ ಪಾತ್ರಗಳಿಗೆ ಡಬ್ಬಿಂಗ್ ಎಷ್ಟು ಇಂಪಾಟರ್ೆಂಟ್ ಅಂತ. ನಿಜವಾಗ್ಲೂ ಕನ್ನಡದಲ್ಲಿ ಇಷ್ಟು ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿದ್ದುದರ ಹಿಂದೆ ಇವರಿಬ್ಬರ ಡಬ್ಬಿಂಗ್ ಎಫಟರ್್ ರಿಯಲಿ ಗ್ರೇಟ್ ಅಂತ ಅನಿಸುತ್ತೆ. ಈ ಸಿನಿಮಾದಲ್ಲಿ ಡಬ್ಬಿಂಗ್ ಮಾಡುವ ನನ್ನ ಬಹುದಿನದ ಆಸೆ ಈಡೇರಿದೆ. ಡಬ್ಬಿಂಗ್  ಮಾಡೋಕೆ  ನಮ್ ಡೈರೆಕ್ಟ್ರು ತುಂಬಾ ಸಹಾಯ ಮಾಡಿದ್ದಾರೆ.

ಚಿತ್ರದ ನಿರ್ಮಾಣದಲ್ಲಿ ನಿಮ್ಮ ಯಜಮಾನ್ರು ರಾಮುರವರ ಸಹಕಾರ ಹೇಗಿತ್ತು?
ನಾನೊಬ್ಬ ಕಲಾವಿದೆ, ಅವರು ನಿಮರ್ಾಪಕರು ಅನ್ನುವ ರೀತಿಯಲ್ಲಿ ಹೇಳೊದಾದ್ರೆ, ರಾಮು ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಪ್ಯಾಷನ್ ಇರುವಂತಹ ವ್ಯಕ್ತಿ. ನಮ್ಮ ಕನ್ನಡ ಸಿನಿಮಾಗಳು ಯಾವ ಭಾಷೆಯ ಸಿನಿಮಾಗಳಿಗಿಂತ ಕಡಿಮೆ ಇಲ್ಲ ಅನ್ನುವ ಹಾಗೆ ಸಿನಿಮಾ ನಿಮರ್ಾಣ ಮಾಡುವ ಕನಸು ಕಾಣುತ್ತಾರೆ. ಶೂಟಿಂಗ್ನಲ್ಲಿ ಏನೇ ಪ್ರಾಬ್ಲಂ ಆದ್ರೂ ಸಹ ತುಂಬಾ ಈಜಿಯಾಗಿ ಸಾಲ್ವ್ ಮಾಡುತ್ತಾರೆ. `ಶಕ್ತಿ' ಸಿನಿಮಾ ಕೂಡ ತುಂಬಾ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಖಂಡಿತ ಈ ಸಿನಿಮಾ ಬಂದ ಮೇಲೆ ಥಿಯೇಟರ್ನ ಮುಂದೆ ರಿಪೀಟ್ ಆಡಿಯನ್ಸ್ ಜಾಸ್ತಿ ಇರುತ್ತಾರೆ ಅನ್ನುವ ನಂಬಿಕೆ ಇದೆ.

ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಆ್ಯಕ್ಷನ್ ಸಿನಿಮಾಗಳಲ್ಲಿ ಅಭಿನಯಿಸಿದ್ದೀರಿ? `ಶಕ್ತಿ' ಹಿಂದಿನ ಸಿನಿಮಾಗಳಿಗಿಂತ ಹೇಗೆ ವಿಭಿನ್ನ?ಈ ಹಿಂದೆ ನಾನು ಮಾಡಿದ ಎಲ್ಲ ಸಿನಿಮಾಗಳು ಒಂದು ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಡಿದ ಕಥೆಗಳೇ. ಆದರೆ ಶಕ್ತಿ ಸಿನಿಮಾವನ್ನು ಹಿಂದಿನ ಸಿನಿಮಾಕ್ಕೆ ಕಂಪೇರ್ ಮಾಡಿ ನೋಡಿದಾಗ, ಶಕ್ತಿಯ ಇಂಟ್ರಡೋಕ್ಷನ್, ಫೈಟ್, ಮೇಕಿಂಗ್ ಕಂಪ್ಲೀಟ್ಲಿ  ಹೊಸತಾಗಿದೆ. ಖಂಡಿತ ಹಿಂದಿನ ಸಿನಿಮಾಗಳಂತೆ ಇಲ್ಲ. ಶಕ್ತಿ ಕಮಷರ್ಿಯಲ್ ಆಗಿ ಇನ್ನಷ್ಟು ಮನಸ್ಸಿಗೆ ಖುಷಿ ಕೊಡುತ್ತೆ. ಆ್ಯಕ್ಷನ್ ಫಿಲಂ ಇಷ್ಟಪಡುವವರಿಗೆ ಇದು ದೊಡ್ಡ ಹಬ್ಬವೇ ಸರಿ.

ಆ್ಯಕ್ಷನ್ ಸಿನಿಮಾ ಅಂದ ಮೇಲೆ ಸಣ್ಣಪುಟ್ಟ ಗಾಯ, ಏಟು ಸಹಜ. ನೀವು ಅಪಾಯಕಾರಿ ಸ್ಟಂಟ್ಗಳನ್ನು ಮಾಡುವಾಗ ಅಂತಹ ಪ್ರಸಂಗಗಳೇನಾದರೂ?ಇದುವರೆಗೂ ಅಂತಹ ಪ್ರಾಬ್ಲೇಂ ಆ್ಯಕ್ಷನ್ ಸೀನ್ ಮಾಡೋವಾಗ ಆಗಿಲ್ಲ. ಪ್ರತಿ ಆ್ಯಕ್ಷನ್ ಸಿನಿಮಾ ಮಾಡುವಾಗಲೂ ತುಂಬಾ ಸೆಫ್ಟಿ ಮೆಜರ್ ಇದ್ದೆ ಇರುತ್ತೆ. ಕೆಲವೊಂದು ಸಲ ನಾನು ಡ್ಯೂಪ್ ಇಲ್ಲದೆ ಮಾಡೋಕೆ ರೆಡಿ ಇದ್ರೂ ಸಹ ಅವರು ಒಪ್ಪುತ್ತಿರಲಿಲ್ಲ. ಫೈಟ್ಮಾಸ್ಟ್ರುಗಳು ನನ್ನ ಬಗ್ಗೆ ತುಂಬಾ ಕೇರ್ ತಗೊಂಡು ಫೈಟ್ ಸೀನ್ಗಳನ್ನು ಡಿಸೈನ್ ಮಾಡೋರು. ನನ್ನ ಬಹಳಷ್ಟು ಸಿನಿಮಾಗಳಿಗೆ ಥ್ರಿಲ್ಲರ್ ಮಂಜುಅವರೇ `ಆ್ಯಕ್ಷನ್ ಹೇಳಿದ್ದು. `ಶಕ್ತಿ' ಸಿನಿಮಾದಲ್ಲಿ  4-5 ಫೈಟ್ಮಾಸ್ಟರ್ಗಳು ತುಂಬಾ ರಿಸ್ಕ್ ಇದ್ರೂ ಸಹ ತುಂಬಾ ಸಪೋರ್ಟರ್ ಮಾಡಿ ಈಜಿಯಾಗಿ ಮಾಡಿಕೊಟ್ರು. ನಾನು ಡ್ರೈವಿಂಗ್ನಲ್ಲಿ ಪರಫೆಕ್ಟ್ ಇದ್ರೂ ಸಹ ಚೇಸಿಂಗ್ ಸೀನಲ್ಲಿ ತುಂಬಾ ಸೆಫ್ಟಿಯಿಂದ ಶೂಟ್ ಮಾಡಿಸೋರು. ರವಿವರ್ಮ, ರಾಮ್ಲಕ್ಷ್ಮಣ್, ಪಳನಿರಾಜ್ ಇನ್ನು ಹಲವರು ಶಕ್ತಿಗಾಗಿ ಫೈಟ್ ಮಾಡಿಸಿದ್ದಾರೆ. 




ಬೆತ್ತಲೆಯ ಕನ್ನಡಿಯಲ್ಲಿ ...

ಅಂದದ ದಿನಗಳು ಬರುವವು ಸದಾ..
ಕಳೆದ ಕ್ಷಣಗಳ ಮರುಚಿಂತನೆ,ಅವಗಾಹನೆ
ಕಣ್ಣಿಗೆ ರಾಚುವ ಸೌಂದರ್ಯ,ಬೆಳವಣಿಗೆ
ಕನ್ನಡಿಯಲಿ ಬೆತ್ತಲೆಯ ಪ್ರತಿಬಿಂಬದ ಹೊಲಸು
ದೇಹ ಬಲಿದಿದೆ,ಸುಖವನ್ನು ಉಂಡಾಗಿದೆ,
ಆದರೂ ಏನೋ ನಮ್ಮ ಮೇಲೆ ನಮಗೆ ಅತ್ಯುಕ್ತತೆ,
ನಾವು ಸುಂದರಪುರುಷರು, ಹೆಣ್ಣುಹಾದರಗಳೇನು ಹೊಸತಲ್ಲ.
ಕಟ್ಟಿಕೊಂಡವಳ ನಲುಮೆಯ ಪ್ರೀತಿಯ ದರ್ಬಾರ್
ಕಡಿಮೆಯಾದಲ್ಲಿ ಬೇಸರ,
ಬೆಳೆದ ಮಕ್ಕಳ ದೇಹ ಕಣ್ಣಿಗೆ ಬೇಸರ
ಬಲಿತ ತೊಡೆಗಳ ಮುಂದೆ ಶೋಕಿ ಮಾಡಲು ಮುಜುಗುರ
ರಾತ್ರಿ ಕಳೆದ ಸುಖವು ಆಗದು ಕಾಮದ ಜ್ವರಕ್ಕೆ
ಮುಗಿಯಿತೇ ಸುಖದ ವ್ಯಭಿಚಾರ ?
ಕಳೆಯಿತು ಜೀವನದ ಲೆಕ್ಕಾಚಾರ
ಮಗ್ಗಿಯಲಿ ನಾನು ದಡ್ಡ, ಹಾಗೆಂದುಕೊಳ್ಳಲು ನಾನ್ಯಾರು ?

Thursday 5 January 2012

ಕಲಾವಿದರ ಕಥಾನಕ' ಹೊತ್ತಿಗೆಯ ಲೋಕಾರ್ಪಣೆ


ಆತ್ಮೀಯ ಸ್ನೇಹಿತರೇ,

ನಮ್ಮ ಸಂಸ್ಥೆ ಅಂದರೆ `ಪಂಚಮಿ ಪಬ್ಲಿಕೇಷನ್ಸ್' ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟ, ಉತ್ಕ್ರುಷ್ಟ ಹಾಗೂ ಓದುಗ ಅಭಿರುಚಿಯ ಕೃತಿಗಳನ್ನು ಪಬ್ಲೀಷ್ ಮಾಡುವ ನಿಟ್ಟಿನಲ್ಲಿ ಈ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ಈಗಾಗಲೇ ನನ್ನ ಈ ಪ್ರಯತ್ನಕ್ಕೆ ನನ್ನ ಅಕ್ಕ, ಅಪಾರ ಸ್ನೇಹಿತರು ಎಲ್ಲ ರೀತಿಯಿಂದಲೂ ಕೈ ಜೋಡಿಸಿದ್ದಾರೆ. ಅವರೆಲ್ಲರ ಸಹಕಾರ, ಬೆಂಬಲದೊಂದಿಗೆ ಸಂಸ್ಥೆಯ ಮೊದಲ `ಹೊತ್ತಿಗೆ' ನಾಳೆ ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ನಡೆಯುತ್ತಿರುವ ಪುಸ್ತಕ ಮೇಳದಲ್ಲಿ ಬಿ...ಡುಗಡೆಗೊಳ್ಳುತ್ತಿದೆ. ಈ ಮೇರು ಕೃತಿಯನ್ನು ಬಿಡುಗಡೆಗೊಳಿಸುತ್ತಿರುವವರು ಡಾ.ಸಿದ್ದಲಿಂಗಯ್ಯ, ಸಾಹಿತಿ, ವಿಧಾನಪರಿಷತ್ ಸದಸ್ಯರು.
ಕೃತಿಯ ಬಗ್ಗೆ : `ಕಲಾವಿದರ ಕಥಾನಕ' ಹೆಸರಿನ ಈ ಪುಸ್ತಕವು ಈ ಹಿಂದೆ `ವಿಕ್ರಾಂತ ಕರ್ನಾಟಕ' ಪತ್ರಿಕೆಯಲ್ಲಿ
ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದ್ದ ಬಣ್ಣದ ನೆನಪು ಕಾಲಂನ ಸಮಗ್ರ ಸಂದರ್ಶನದ ಚಿತ್ರಣವು ಈ ಹೊತ್ತಿಗೆಯಲ್ಲಿ ಅಡಕವಾಗಿದೆ. 75 ವರ್ಷಗಳ ಕನ್ನಡ ಸಿನಿಮಾ ರಂಗದಲ್ಲಿ ದೈತ್ಯ ಪ್ರತಿಭೆಗಳಾಗಿ, ಕಲಾವಿದರಾಗಿ, ತಂತ್ರಜ್ಞರಾಗಿ ದುಡಿದ ಸುಮಾರು 60 ಜನ ಪ್ರತಿಭಾವಂತರ ಸಂದರ್ಶನ ಹಾಗೂ ಸಣ್ಣ ಜೀವನಚರಿತ್ರೆ ಇದೆ. ಆರ್ ಎನ್ ಜಯಗೋಪಾಲ್, ಬಿ.ಸರೋಜಾದೇವಿ, ಜಯಂತಿ, ಶ್ರೀನಿವಾಸಮೂರ್ತಿ, ರಾಮಕೃಷ್ಣ, ದುನಿಯಾ ವಿಜಿ, ಹಂಸಲೇಖ, ವಿನಯ್ಪ್ರಸಾದ್, ಜೂಲಿ ಲಕ್ಷ್ಮಿ, ಅಶ್ವಥ್, ಎಎಸ್ ಮೂರ್ತಿ , ಗಾಯತ್ರಿ ಅನಂತ್ನಾಗ್ , ಪಂಡೀರಿಬಾಯಿ,ಶಂಕರ್ನಾಗ್ ಹೀಗೆ ಸುಮಾರು 60 ಜನ ಕಲಾವಿದರು ಹಾಗೂ ತಂತ್ರಜ್ಞರ ಸಮಗ್ರ ಚಿತ್ರಣ ಈ `ಕಲಾವಿದರ ಕಥಾನಕ'ದಲ್ಲಿ ಕಟ್ಟಿಕೊಡಲಾಗಿದೆ. ಸುಮಾರು 576 ಪುಟಗಳ ಗ್ರಂಥವನ್ನು ಬರೆದವರು ನನ್ನ ಆತ್ಮೀಯರು, ಸಹೋದ್ಯೋಗಿಗಳಾದ ಹಿರಿಯ ಪತ್ರಕರ್ತ ಕಗ್ಗರೆ ಪ್ರಕಾಶ್.
ಲೇಖಕರ ಬಗ್ಗೆ: ಕಗ್ಗರೆ ಪ್ರಕಾಶ್ ಕಳೆದ 20 ವರ್ಷಗಳಿಂದ ಪತ್ರಿಕೊದ್ಯಮ ಹಾಗೂ ಸಾಹಿತ್ಯಕ ವಲಯದಲ್ಲಿ ತೊಡಗಿಸಿಕೊಂಡವರು. ಇದುವರೆಗೂ ಸುಮಾರು 16 ಕೃತಿಗಳನ್ನು ಕನ್ನಡ ಸಾಹಿತ್ಯವಲಯಕ್ಕೆ ನೀಡಿದ್ದಾರೆ. ಕಳೆದ ವರ್ಷ ಇವರು ರಚಿಸಿದ ನಟಿ ಶೃತಿಯ ಜೀವನಚರಿತ್ರೆ `ಶೃತಿ ಪ್ರೇಮಾಯಣ' ಅತ್ಯಂತ ಜನಪ್ರಿಯತೆಯನ್ನು ಪಡೆಯುವುದರ ಜೊತೆಗೆ ವಿಮರ್ಷಕರ ಮೆಚ್ಚುಗೆ ಗಳಿಸಿತ್ತು. ಈ ಬಾರಿ ಕಲಾವಿದರ ಕಥಾನಕ ಕೃತಿಯನ್ನು ಪ್ರಕಾಶನ ಮಾಡಲು ನನಗೆ ನೀಡಿದ್ದಾರೆ. ಹಾಗಾಗಿ ಪಂಚಮಿ ಪಬ್ಲಿಕೇಷನ್ಸ್ ಸಂಸ್ಥೆಯ ಮೂಲಕ ಈ ಕೃತಿ ಪ್ರಕಾಶನಗೊಳ್ಳುತ್ತಿದೆ.

ಈ `ಕಲಾವಿದರ ಕಥಾನಕ' ಅಪೂರ್ವಕೃತಿಯು ನಾಳೆ ಡಾ.ಸಿದ್ದಲಿಂಗಯ್ಯರ ಮೂಲಕ ಲೋಕಾರ್ಪಣೆಗೊಳ್ಳುತ್ತಿದೆ. ನಿಮ್ಮೆಲ್ಲರ ಪ್ರೀತಿಪೂರ್ವಕ ಸಹಕಾರ ಹಾಗೂ ಆಗಮನವನ್ನು ನಿರೀಕ್ಷಿಸುತ್ತಾ..

ಸ್ಥಳ: ರವಿಂದ್ರಕಲಾಕ್ಷೇತ್ರದ ಹಿಂಭಾಗ ಪುಸ್ತಕ ಮೇಳದಲ್ಲಿ
ಸಮಯ: ಮಧ್ಯಾಹ್ನ 3.30ಕ್ಕೆ

ಧನ್ಯವಾದಗಳು
ಪ್ರೀತಿಯಿಂದ
ಶ್ರೀಧರ್ ಜಿಸಿ ಬನವಾಸಿ
ಪ್ರಕಾಶಕ-ಪಂಚಮಿ ಪಬ್ಲಿಕೇಷನ್ಸ್, ಬೆಂಗಳೂರು

 

Sunday 1 January 2012

ಮಿಥ್ಯದ ಪರಿಧಿ



ಮನಸ್ಸಿಗೆ ಸದಾ ಬುದ್ದಿಯ ಒದೆ..
ಬುದ್ದಿಗೆ ಮನಸ್ಸಿನ ಸೆರೆ..
ದೇಹಕೆ ಸದಾ ಉಸಿರಿನ ಹೊರೆ..
ತಡೆಯ ಸುಳಿಯ ಉಸಿರಾಟ 
ಕೆಲವೊಮ್ಮೆ ನಮ್ನನ್ನು ಕಾಡುತ್ತದೆ,
ಕೆಲವೊಮ್ಮೆ ಜೀವ ನೀಡುತ್ತದೆ. ಹಾಗಂತ
ಉಸಿರಿಗೆ ಅರಿವಿಲ್ಲದೇ ನಾವು ಇರಲು ಸಾಧ್ಯವೇ..?
ಬುದ್ದಿಯ ತೂಗುಕತ್ತಿ ಇರದಿದ್ದರೇ ಮನಸಿಗೆ
ಹೇಳುವರ್ಯಾರು?
ಇರುವ ಸತ್ಯ ಇರಲೇಬೇಕು. ಮಿಥ್ಯದ ಪರಿಧಿಗೆ
ಬೇಲಿ ಇರಲೇಬೇಕು
ಅಂಗೈ ಸಾಮ್ರಾಜ್ಯದ  ಒಡೆಯರು ನಾವು.
ಬುದ್ದಿ,ಮನಸ್ಸುಗಳ ಕುದುರೆ ಕಟ್ಟಿ, ಉಸಿರಿನ
ಚಾಟಿ ಏಳೆದುಕೊಂಡು
ಬಿಡು ನಿನ್ನ ಬದುಕಿನ ಗಾಡಿಯನ್ನ,
ಹಿಡಿಯುವರಾರು ನಿನ್ನನ್ನ..!