Saturday 10 September 2011

ಹುಟ್ಟಿದ ದಿನ

ವರ್ಷಕ್ಕೊಮ್ಮೆ ನೆನೆಯುವ ದಿನವನ್ನು ಮತ್ತೆ ನೆನೆಯುವ ದಿನ,
ಹಾಗಂತ ಸುಮ್ಮನೆ ನೆನೆಯಲು ಸಾಧ್ಯವೇ ?
ಸ್ನೇಹಿತರ ಶುಭಾಶಯಗಳಲಿ `ನೆಂದು' ಎದ್ದರೆ ಅದೇ ಸುದಿನ

 

ಆ ಕ್ಷಣ..!

ಮನಸ್ಸಿನ ಭಾವನೆಗಳು ಒಮ್ಮೇಲೆ ಪುಟಿದೆದ್ದು ರಕ್ತಾಕ್ಷರದಲಿ
ಬರೆದಿಟ್ಟ ಕ್ಷಣ
ಧಗಧಗ ಉರಿಯುತ್ತಿರುವ ಬಿರುಕೆದ್ದ ಧರೆಯಲಿ ಪನ್ನೀರನ್ನು
ಎರಚಿದ  ಆ ಕ್ಷಣ
ಕಟ್ಟಡವಿಯಲಿ ಕಂಗೆಟ್ಟು ದಂಗಾಗಿ ಮಂಕಾದವನಿಗೆ ಬೆಳಕಿನ
ದೀವಿಗೆಯನು ಕಂಡಾಗಿನ  ಆ ಕ್ಷಣ..!
ಎಳೆಯ ಮನಸ್ಸಿನ ಚಿಗುರನ್ನು ಕಿತ್ತೆಸೆದು, ಭಾವನೆಗಳು ಮೇಲೇಳದೇ
ಮರೀಚಿಕೆಯಾದ ಆ ಕ್ಷಣ
ಎಳೆಯ ಮನಸ್ಸಿನ ಚಿಗುರನು ಕಿತ್ತೆಸೆದು ಭಾವನೆಗಳು ಮೇಲೇಳದೇ
ಮರೀಚಿಕೆಯಾದ ಆ ಕ್ಷಣ..
ನಾನು ನನದೆಂಬ ಅರಿಷಡ್ವಗಗಳ ಬಲೆಯೊಳಗೆ ಸಿಲುಕಿ ಹೊರಬರಲಾರದೇ
ಹುದುಗಿ ಹುಳುವಾದ ಆ ಕ್ಷಣ
ತನ್ನ ಮಕ್ಕಳ ಏಳಿಗೆಗಾಗಿ ಗಂಧದಂತೆ ತನ್ನ ದೇಹವನ್ನು ತೆಯ್ದು ಕೊನೆಗೂ
ಸುಖ ಕಂಡ ತಾಯಿಯ ಆ ಕ್ಷಣ
ಅತ್ಯಾಚಾರದ ಫಲದ ಪಿಂಡವನ್ನು ಹೊತ್ತುಕೊಂಡು ಭವಿಷ್ಯದ ಬೆಳಕು ಕಾಣದ
ನಿಗಱತಿಕಳು ಅನುಭವಿಸುವ ಆ ಕ್ಷಣ

ಗೆಲ್ಲದ ಅರಮನೆ

ನನ್ನ ಬರಡು ಮನಸಿನ ಮರುಭೂಮಿಯಲಿ ಅರಮನೆಯನು
ಕಟ್ಟುವ ಬೆಳಕು ಮೂಡಿತು.
ಅರಮನೆಯನ್ನು ಹಿಂದೆ ಮುಂದೆ ಯಾರು ನೋಡಿರಬಾರದು
ಎಂದು ಮನದಲ್ಲಿ ಅಂದುಕೊಂಡೆ.
ಚಿನ್ನದ ಇಟ್ಟಿಗೆಗಳೇ ಬೇಕಾದವು,ಅದರ ಅಡಿಪಾಯ ಹಾಗೂ ಗೋಡೆಗೆ
ಮುತ್ತುರತ್ನಪಚ್ಚೆಗಳೇ ಇದರ ರಂಗೋಲಿಯಾದವು.
ಛೇ..! ಅದೇಕೋ ಏನೋ , ಅರಮನೆಯ ಶಿಖರ ಕಡಿಮೆಯಾಯಿತೆನಿಸಿತು
ಅದನ್ನು ಬಾನೆತ್ತರಕ್ಕೆ ಮುಟ್ಟಿಸಿದೆ.
ವಿಶ್ವದ ಅದ್ಭುತ ವಿಸ್ಮಯಗಳು, ವಸ್ತುಗಳು ಮುತ್ತುರತ್ನ
ಕನಕಾದಿಗಳಿಂದ,ವಜ್ರವೈಢೂರ್ಯಗಳಿಂದ ನನ್ನ ಅರಮನೆಯ ತುಂಬಿಸಿದೆ.
ನನ್ನೆದೆಯಲ್ಲಿನ ನೋವು ನಲಿವು ಸವಿನೆನಪುಗಳೇ ಭವ್ಯ ಅರಮನೆಯ
ಎಂಟುದಿಕ್ಕಗಳಿಗೂ ಆಧಾರಸ್ಥಂಭವಾದವು.
ನನ್ನ ಜಡದೇಹದ ಮನಸ್ಸೆಂಬ ರತ್ನಪಕ್ಷಿ ಇಲ್ಲಿ ಬಂದು ವಾಸಿಸತೊಡಗಿತು.
ಹುಣ್ಣಿಮೆಯ ಪೂಣಚಂದ್ರ,ಸೂರ್ಯಾದಿ ಮಿತ್ರರೇ ಬೇಕಾದರೂ ಭವನವ ಬೆಳಗಲು
ದಿನಕಳೆದಂತೆ ಸ್ತಂಭಗಳಲ್ಲಿ ಬಿರುಕು ಮೂಡಿತು.
ಅರಮನೆಯು ತನ್ನ ಶೋಭೆಯನ್ನು ಕಳೆದುಕೊಳ್ಳಲಾರಂಭಿಸಿತು
ಯಾರಿಗೇ ತಾನೇ ತಿಳಿದಿತ್ತು, ಭವ್ಯಭವನವು ಬದುಕೆಂಬ
ಸುಂಟರಗಾಳಿಯನ್ನು ಎದುರಿಸಲಾಗದೇ ಹೀಗೆ ಮರಳಿನಲ್ಲಿ
ಮುಚ್ಚಿಹೋಗುವುದೆಂದು,
ನನ್ನ ಮನಸ್ಸೆಂಬ ರತ್ನಪಕ್ಷಿ ಅನಾಮಿಕನಂತೆ ಓಡಿಹೋಯಿತು
ಅಂದು ನಾನು ನಾನಾಗಿರಲಿಲ್ಲ.
ಆಗ ದೇವರನು ದ್ವೇಷಿಸಿದೆ,ಶಪಿಸಿದೆ.ಬಾಣದಿಂದ ಸಿಕ್ಕಿಹಾಕಿಕೊಂಡ
ಹೃದಯದ ಹಾಗೆ. ದೇವರು ಬೆಸೆದ ಬಲೆಯಲಿ
ಸಿಲುಕಿಹಾಕಿಕೊಂಡಿದ್ದೆ. ಇದಕ್ಕಾಗಿ ದೇವರನು ಶಪಿಸಿದರೆ
ಮುಕ್ತಿ ಸಿಗದೆಂದು ಸುಮ್ಮನಾದೆ.
 ಆ ಸ್ಥಿತಿಯನು ಹೇಳಲಾಗದು, ಒಂಥರಾ ತೀರದ ಒಣದಾಹ
ಅವ ನನಗಿಂತ ಬಲು ಛಾಲಾಕಿ
ನನಗೆ ಈಗಿನದು ಕಂಡರೆ ಆತನಿಗೆ ಅಂತ್ಯವೇ ಎದುರುಗಿರುತ್ತದೆ
ನಾ ಗೆಲ್ಲಲಿಲ್ಲ ನನ್ನರಮನೆ..!