Thursday 27 December 2012

ಬನವಾಸಿಗರು ಪುಣ್ಯವಂತರು ಅಂದ ನಾಡೋಜ ಡಾ. ದೇಜಗೌ



ಇತ್ತೀಚಿನ ಒಂದು ಸಂದರ್ಭವನ್ನು  ಬನವಾಸಿಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು.

ಕಳೆದ ವಾರ ನಮ್ಮ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಅಧ್ಯಕ್ಷರಾಗಿ ಬನ್ನಿ ಅಂತ ಕನ್ನಡನಾಡಿನ ಹೆಸರಾಂತ ಹಿರಿಯ ಸಾಹಿತಿಗಳು, ಪಂಪ ಪ್ರಶಸ್ತಿ ಪುರಸ್ಕೃತರು ಆಗಿರುವ ನಾಡೋಜ ಡಾ. ದೇ. ಜವರೇಗೌಡರನ್ನು ಭೇಟಿ ಮಾಡಲು ಮೈಸೂರಿನ ಅವರ ಕುವೆಂಪು ಕುಟೀರಕ್ಕೆ ಹೋಗಿದ್ದೆ. ದೇಜಗೌ ಅವರಿಗೆ ಈಗಾಗಲೇ 94 ವರ್ಷವಾಗಿದೆ. ನಮ್ಮ ಹೈಸ್ಕೂಲ್ ಪಠ್ಯಪುಸ್ತಕದಲ್ಲಿ ಅವರು ಬರೆದ ಒಂದು ಗದ್ಯ ವಿದೆ. ನೀವೆಲ್ಲ ದೇಜಗೌರ ಗದ್ಯವನ್ನು ಓದಿರುವಿರೆಂದು ನಂಬಿರುತ್ತೇನೆ. ರಾಷ್ಟ್ರಕವಿ ಕುವೆಂಪು ಅವರ  ನೆಚ್ಚಿನ ಶಿಷ್ಯರಾಗಿರುವ ದೇಜಗೌ, ತಮ್ಮ ಇಳಿ ವಯಸ್ಸಿನಲ್ಲೂ ಕುವೆಂಪು ಹೆಸರಿನಲ್ಲಿ ವಿದ್ಯಾಸಂಸ್ಥೆಯನ್ನು ನಡೆಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಕೂಡ ಆಗಿದ್ದವರು. ಕುವೆಂಪು ಹೆಸರಿನಲ್ಲಿ ಪ್ರತಿವರ್ಷ ಅನೇಕ ಸಾಹಿತ್ಯಕ ಕೆಲಸಗಳನ್ನು ಮಾಡುತ್ತಾರೆ. ಕನ್ನಡ ನಾಡಿನ ಉನ್ನತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ದೇಜಗೌ ಅವರನ್ನು ರಾಜಕೀಯವಾಗಿ ಸ್ವಲ್ಪ ಪ್ರಭಾವಿ ಸಾಹಿತಿ ಅಂದರೂ ತಪ್ಪೇನಿಲ್ಲ. ದೇಜಗೌ ಯಾವುದಾದರೂ ಹೋರಾಟದಲ್ಲಿ ಭಾಗವಹಿಸುತ್ತಾರೆ ಅಂದರೆ, ಚಳುವಳಿಗೆ ಬೇರೆ ರೀತಿಯ ಶಕ್ತಿ ಸಿಗುತ್ತದೆ. ಹೀಗಾಗಿ ಅನೇಕ ಕನ್ನಡ ಪರ ಚಳುವಳಿಗಳಲ್ಲಿ ದೇಜಗೌ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.

ದೇಜಗೌ ಅವರನ್ನು ಕುಟೀರದಲ್ಲಿ ಭೇಟಿ ಮಾಡಿ ನನ್ನ ಪರಿಚಯ ಮಾಡಿಕೊಂಡೆ. `ನಾನು ಬನವಾಸಿಯವ' ಅಂತ ಹೇಳಿದ ಕೂಡಲೇ ಅವರು ಹೇಳಿದ್ದು ಒಂದೇ ಮಾತು. `ಬನವಾಸಿಯಲ್ಲಿ ಹುಟ್ಟಿದ ನೀವೆಲ್ಲಾ ಪುಣ್ಯವಂತರುಅಂತ. ಅವರ ಮಾತಿಗೆ, ನಾನು ಉತ್ತರ ಕೊಡಲಾಗಲಿಲ್ಲ. ಕೊನೆಗೆ `ಹೌದು ಸರ್ನಿಜಕ್ಕೂ ನಾವೆಲ್ಲಾ ಪಂಪನ ನಾಡಿನಲ್ಲಿ ಹುಟ್ಟಿದ್ದೇವೆ, ಹಾಗಾಗಿ ಪುಣ್ಯವಂತರು, ನಿಮ್ಮ ಮಾತು ನಿಜಅಂತ ಹೇಳಿದೆ. 94 ವರ್ಷದ ದೇಜಗೌ ಮಂಡ್ಯ-ಮೈಸೂರು ಪ್ರಾಂತ್ಯದಲ್ಲಿ ಹುಟ್ಟಿದವರು, ಆಡಿದವರು, ಒಕ್ಕಲಿಗರ ಮನೆತನದಲ್ಲಿ ಹುಟ್ಟಿದರೂ, ತುಂಬಾ ಕಷ್ಟಪಟ್ಟು ವಿದ್ಯೆಯನ್ನು ಪಡೆದವರು. ಮೈಸೂರು ಅರಸರ ಆಳ್ವಿಕೆಯನ್ನು ನೋಡಿದವರು, ಕನ್ನಡದ    ಹಳೆಯ  ಹಾಗೂ  ಸಮಕಾಲೀನ ಸಾಹಿತಿಗಳನ್ನು ಬಲ್ಲವರು. ಮೈಸೂರು, ಬೆಂಗಳೂರು ಸಾಹಿತ್ಯದ ವಲಯದಲ್ಲಿ ಗುರುತಿಸಿಕೊಂಡರೂ, ಈಗ ಅಪ್ಪಟ ಮೈಸೂರಿಗರಾಗಿರುವ ದೇಜಗೌ  ಬನವಾಸಿಯಲ್ಲಿ ಹುಟ್ಟಿದವರನ್ನು ಪುಣ್ಯವಂತರು ಅಂತ ಹೇಳಿರುವುದು ಬನವಾಸಿಗರಾದ ನಾವೆಲ್ಲ ಹೆಮ್ಮೆಪಡುವಂತಹ ವಿಷಯ
ದೇಜಗೌ ನಮ್ಮ ಪುಸ್ತಕ ಕಾರ್ಯಕ್ರಮಕ್ಕೆ ಬರಲು ಒಪ್ಪಿದರು. ಜನವರಿ 6,2013ರಂದು ಮೈಸೂರಿನಲ್ಲಿ ನಡೆಯುವ ನಮ್ಮ ಕಾರ್ಯಕ್ರಮಕ್ಕೆ ಡಾ.ದೇಜಗೌ ಅಧ್ಯಕ್ಷರಾಗಿ ಆಗಮಿಸಲಿದ್ದಾರೆ

ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬನ್ನಿ…


ಆತ್ಮೀಯ  ಸ್ನೇಹಿತರಿಗೆ,
ಮುಂಚಿತವಾಗಿ ಹೊಸ ವರ್ಷವು ಸರ್ವರಿಗೂ ಶುಭವನ್ನು ತರಲಿ ಅಂತ ಹಾರೈಸುತ್ತೇನೆ.

ವಿಷಯವೇನಂದರೆ, ಜನವರಿ 6, 2013, ಭಾನುವಾರದಂದು ನಮ್ಮ ಸಂಸ್ಥೆ ಪಂಚಮಿ ಪ್ರಕಾಶನದ ಮೂರು ಪುಸ್ತಕಗಳು ಮೈಸೂರಿನಲ್ಲಿ ಬಿಡುಗಡೆಯಾಗಲಿವೆ. ಇದರಲ್ಲಿ ನನ್ನ ಮೊದಲ ಕಥಾಸಂಕಲನ ಕೃತಿ `ಅಮ್ಮನ ಆಟೋಗ್ರಾಫ್ಕೂಡ ಸೇರಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕನ್ನಡನಾಡಿನ ಹೆಸರಾಂತ ಹಿರಿಯ ಸಾಹಿತಿಗಳಾದ ನಾಡೋಜ ದೇಜಗೌ, ಹಾಗೂ ಡಾ. ಸಿಪಿಕೆ ಜೊತೆಗೆ ಇನ್ನು ಹಲವಾರು ಕನ್ನಡ ನಾಡಿನ ಹಿರಿಯ ಸಾಹಿತಿಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸೇರಲಿದ್ದಾರೆ. ಹಾಗಾಗಿ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾವೆಲ್ಲ ಆಗಮಿಸಬೇಕೆಂದು ಮೂಲಕ ಕೇಳಿಕೊಳ್ಳುತ್ತೇನೆ. ನಿಮ್ಮ ಆಗಮನವನ್ನು ಹೃದಯತುಂಬಿ ಸ್ವಾಗತಿಸುತ್ತೇನೆ.

ಧನ್ಯವಾದಗಳೋಂದಿಗೆ
ಶ್ರೀಧರ ಬನವಾಸಿ(ಫಕೀರ)
ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಬೆಂಗಳೂರು

ಬಿಡುಗಡೆಯಾಗಲಿರುವ ನನ್ನ ಕಥಾಸಂಕಲನ ಪುಸ್ತಕ `ಅಮ್ಮನ ಆಟೋಗ್ರಾಫ್’  ಈಗಾಗಲೇ ಕೆಳಕಂಡ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ. ತಾವೆಲ್ಲ ಕೊಂಡು ಓದುವಿರೆಂದು ಭಾವಿಸುತ್ತೇನೆ. (ಪುಸ್ತಕದ ಬೆಲೆ-100/-)

1.    ಸಪ್ನ ಬುಕ್ ಹೌಸ್, ಮೆಜೆಸ್ಟಿಕ್-ಗಾಂಧಿನಗರ, ಬೆಂಗಳೂರು
2.    ಸ್ಪರ್ಧ ಚೈತ್ರ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
3.    ಸ್ನೇಹ ಬುಕ್ ಹೌಸ್, ಗಿರಿನಗರ, ಬೆಂಗಳೂರು
4.    ರವಿ ಬೆಳಗೆರೆ ಬುಕ್ಸ್ ಆಂಡ್ ಕಾಫಿ, ಗಾಂಧಿ ಬಝಾರ್, ಬೆಂಗಳೂರು
5.    ಸಾಯಿ ಬುಕ್ ವಲ್ಡ್ , ಗಾಂಧಿಬಜಾರ್, ಬೆಂಗಳೂರು
6.    ಟೋಟಲ್ ಕನ್ನಡ, ಜಯನಗರ 4ನೇ ಬ್ಲಾಕ್ , ಬೆಂಗಳೂರು
7.    ರಂಗಶಂಕರ, ಜೆಪಿನಗರ, ಬೆಂಗಳೂರು
8.    ಸುಮುಖ ಬುಕ್ ಹೌಸ್ , ಪೈಪ್ ಲೇನ್, ವಿಜಯ ನಗರ ಬೆಂಗಳೂರು
9.    ನವಾಡ ಬುಕ್ ಸ್ಟಾಲ್, ರಾಜಾಜಿ ನಗರ, ನವರಂಗ್ ಹತ್ತಿರ ಬೆಂಗಳೂರು
10. ಅಂಕಿತ ಪುಸ್ತಕ,  ಗಾಂಧಿ ಬಝಾರ್, ಬೆಂಗಳುರು