Wednesday 9 May 2012

ಬಂಧನದ ಬೇರು


ಅಡಿಗಡಿಯ ನೋವನು
ಒಳಗೊಳಗೆ ಮುಚ್ಚಿಟ್ಟು..
ಬತ್ತದ ಉಸಿರಿನಲಿ,
ಸಂತಸದ ಹೂಮಳೆ ಹರಿದಾಡಿ,
ಒಳಗಿನ ಗಂಟನು ಬಿಡಿಸುವ ತವಕ.
ಕಾಣದ ಬೆಳಕು ಮಳೆಯಾಗಿ,
ಕೆರೆಯಾಗಿ ಭೂಮಿಗೆ ಬಿದ್ದಿರಲು...
ಗುಟುಕು ನೀರನು ಕುಡಿದು ಚಿಗುರೊಡೆಯುವ
ಬೀಜ, ಹಸತನದ ಪ್ರಪಂಚಕ್ಕೆ
ಕಣ್ಣು ಬಿಟ್ಟು ನೋಡುತಿಹುದು.
ನಾ ಬಂದಿರುವೇ, ಹೆದರಬೇಡ ನಿನಗೆ
ಆಸರೆಯಾಗವೆ ಅನ್ನುತಲಿತ್ತು.
ಲೋಕವೇ ಕೈ ಬಿಟ್ಟ ನೋವ ಭಾರ,
ಮರುಗಿ ಒಳಸೇರುವ ಮುನ್ನ, ಬಂಧನದ
ಬೇರು ಸಡಿಲಾಗಲಿ
ಇಲ್ಲವೇ ಸೆರೆಯಾಗಲಿ.