Thursday 6 October 2011

ಬೆರಳ ತುದಿಯಲ್ಲಿ ಜಗತ್ತು ನಿಲ್ಲಬೇಕು ಎಂದವ ಈಗಿಲ್ಲ!-Steve jobs Memory


ಆಯುಧ ಪೂಜೆ ಇದ್ದುದರಿಂದ ಎಲ್ಲ ಪತ್ರಿಕೆಗಳು ವರ್ಷಕ್ಕೊಮ್ಮೆ ಸಿಗುವ ರಜೆಯನ್ನು ಮಜಾ ಮಾಡುತ್ತಿದ್ದ ಹಾಗೆ ಕಾಣುತ್ತಿತ್ತು. ಮುಂಜಾನೆ ಎದ್ದ ಮಬ್ಬಿನಲ್ಲಿ ನನ್ನ ನೆಚ್ಚಿನ ಪತ್ರಿಕೆ ಎಲ್ಲಿದೆ ಅಂತ ಹುಡುಕಾಡಿದಾಗ ನೆನಪದಾದದ್ದೇ ಅಯ್ಯೋ ಪೇಪರ್ಗಳಿಗೆ ನಿನ್ನೇ ರಜೆ ಅಲ್ವಾ? ಅದೇ ಗುಂಗಿನಲ್ಲಿ ಸುದ್ದಿ ನೋಡೋಣವೆಂದು ನ್ಯೂಸ್ ಚಾನೆಲ್ ಹಚ್ಚಿದಾಗ ನೋಡಿದ ಸುದ್ದಿ ಮನಸ್ಸಿಗೆ ಬೇಸರವಾದಂತಹುದು.
ಸ್ಟೀವ್ ಜಾಬ್ಸ್ ನೋ ಮೋರ್ !
ಮಾಚರ್್2, 2011 ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಆ್ಯಪಲ್ ಕಂಪನಿಯ ಐಪಾಡ್-2ನ ಬಿಡುಗಡೆ ಮಾಡಿದಾಗ ಸ್ಟೀವ್ ಜಾಬ್ಸ್ನನ್ನು ಇದುವರೆಗೆ ಕಪ್ಪುಬಣ್ಣದ ಟೀ ಶರ್ಟ, ನೀಲಿ ಬಣ್ಣದ ಜೀನ್ಸ್ನಲ್ಲಿ ನೋಡಿದವರಿಗೆ ಆಶ್ಚರ್ಯವಾಗಿತ್ತು. ಸ್ಟೀವ್ ಇವರೇನಾ ಅನ್ನುವಷ್ಟು ಗೊಂದಲ. ಮುಖದ ಗಲ್ಲ, ಮುಖ, ಹೊಟ್ಟೆ ಜೊಜ್ಜುವಿನಿಂದ ತುಂಬಿಕೊಂಡು ಸುಂದರವಾಗಿ ಕಾಣುತ್ತಿದ್ದ ಆತ, ಆ ದಿನ ನೋಡಲು ತೀರ ಸಣಕಲು ಆಗಿದ್ದ. ಮುಖದ ಗಲ್ಲ, ಕುತ್ತಿಗೆಯಲ್ಲಿದ್ದ ಮಾಂಸ,ಕೊಬ್ಬೆಲ್ಲಾ ಕರಗಿ ತೀರಾ ವಯಸ್ಸಾಗಿ ಕಾಣುವ ಮುದುಕನಂತೆ ಕಾಣುತ್ತಿದ್ದ. ಜಾಬ್ಸ್ ಹೀಗೆ ಕಾಣಲು ಏನಾಗಿರಬಹುದು ಅಂತ  ಮಾಧ್ಯಮದವರು ಹುಡುಕಿದಾಗ ಸಿಕ್ಕ ಉತ್ತರ, ಆತನಿಗಿದ್ದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್!  ಇದು ಕೂಡ ದೊಡ್ಡ ಸುದ್ದಿಯಾಗಿತ್ತು. ಹೀಗಿದ್ದರೂ ತನಗಿದ್ದ ಖಾಯಿಲೆಯ ಬಗ್ಗೆ ಸ್ಟೀವ್ ಮಾತಾಡಿದ್ದು ತುಂಬಾ ಕಡಿಮೆ. 
ಅರರೇ... ಮೊನ್ನೆವರೆಗೂ ಟಿವಿ, ಪೇಪರ್, ಇಂಟರ್ನೆಟ್ನಲ್ಲಿ ಕಾಣಸಿಗುತ್ತಿದ್ದ ವ್ಯಕ್ತಿ ಆ್ಯಪಲ್ ಎಂಬ ದೈತ್ಯ ಕಂಪನಿಯನ್ನು ಬೆಳೆಸಿ ಕೊನೆಕ್ಷಣದಲ್ಲಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿ ತನ್ನಷ್ಟೇ ಸಮರ್ಥನಾಗಿದ್ದ ಟಾಮ್ ಹಾಂಕ್ ಎಂಬ ಸಲಂಗಿಯನ್ನು ಕೂರಿಸಿದವ ಇವತ್ತು ಇಲ್ಲ! 
 ಸ್ಟೀವ್ ಜಾಬ್ಸ್ ಯಾಕೆ ಎಲ್ಲರಿಗೂ ಮಾದರಿಯಾಗುತ್ತಾನೆ?

 ಇತ್ತಿಚೆಗಷ್ಟೇ ಆ್ಯಪಲ್ನ ಇನ್ನೊಂದು ಉತ್ಪನ್ನವನ್ನ ಜಗತ್ತಿಗೆ ಪರಿಚಯಿಸುವಾಗ, ಮಾಧ್ಯಮಗಳಿಗೆ ಈ ಹಿಂದೆ ಇದ್ದ ಹುಮ್ಮಸ್ಸು, ಮಾತನ್ನು ಕೇಳುವ ಉತ್ಸಾಹ ಇರಲಿಲ್ಲ. ಈ ಹಿಂದಿನ ಎಲ್ಲ ಆ್ಯಪಲ್ ಪ್ರಾಡಕ್ಟ್ಗಳನ್ನು ಯಾವಾಗಲೂ ಕಪ್ಪುಬಣ್ಣದ ಟೀಶಟರ್್, ಬ್ಲ್ಯೂ ಜೀನ್ಸ್ ತೊಟ್ಟ ವ್ಯಕ್ತಿ ಅದರ ಬಗ್ಗೆ ಮಾತಾಡುವಾಗ ಆ ಕಾನ್ಸ್ರೆನ್ಸ್ ಹಾಲ್ ತುಂಬಾ ಉತ್ಸಾಹದ ಚಿಲುಮೆ ಚಿಮ್ಮುತ್ತಿತ್ತು. ತಾನು ಜಗತ್ತಿಗೆ ಸುಂದರವಾದುದನ್ನು ಕೊಡುತ್ತಿದ್ದೇನೆ, ಅದು ನಮಗೆಲ್ಲರಿಗೂ ಅವಶ್ಯಕವೆಂದು ಎಂದು ಹೇಳುವ ಆತನ ಮಾತುಗಳೇ ಆ್ಯಪಲ್ ಕಂಪನಿಯನ್ನು ದೈತ್ಯನನ್ನಾಗಿ ಮಾಡಿದ್ದು. ಆತನ ಮಾತಿನ ಮೋಡಿಯೇ ಅಂತದ್ದು. `ಜಗತ್ತಿಗೆ ಏನು ಬೇಕು ಎನ್ನುವುದು ನನಗೆ ಗೊತ್ತು. ನಾನು ಬೇರೆಯವರಿಗಿಂತ ಸುಮಾರು 20 ರಿಂದ 30 ವರ್ಷ ಮುಂದಿನದದನ್ನೇ ಸದಾ ಚಿಂತಿಸುವೆ, ನಾವು ವೇಗವಾಗಿ ಚಿಂತಿಸಿದಷ್ಟು ತಂತ್ರಜ್ಞಾನ ಬಹುಬೇಗವಾಗಿ ಬೆಳೆಯುತ್ತದ'ೆ ಅನ್ನುವುದು ಸ್ಟೀವ್ ಜಾಬ್ಸ್ನ ಪ್ರಬಲ ನಿಲುವಾಗಿತ್ತು. ಹಾಗೆಯೇ ಬೆರಳ ತುದಿಯಲ್ಲಿ ಜಗತ್ತು ನಿಲ್ಲಬೇಕು ಅನ್ನುವ ವಾದವನ್ನು ಇಡೀ ಜಗತ್ತಿಗೆ ತೋರಿಸಿದ ಕೂಡ. ಅತಿ ಕಡಿಮೆ ವಯಸ್ಸಿನಲ್ಲೇ ಮನಸ್ಸು ಶೂನ್ಯವಾಯಿತೆಂದು ಸಂನ್ಯಾಸಿ ಆಗಲು ಭಾರತಕ್ಕೂ ಬಂದಿದ್ದ ಸ್ಟಿವ್ ಆನಂತರ ಭಾರತದಿಂದ ಹೋದ ಮೇಲೆ ಆತನ ಜೀವನವೇ ಬೇರೆಯವರಿಗೆ ಪಾಠವಾಗುವ ಮಟ್ಟಿಗೆ ಬೆಳೆದಿರುವ ಪರಿ ನಿಜಕ್ಕೂ ಗ್ರೇಟ್!. ಇಂದಿಗೂ ಸಾಫ್ಟ್ವೇರ್, ಕಾಪೋರೇಟ್, ಫೈನಾನ್ಸ್, ಐಐಎಮ್, ಐಐಟಿಗಳಲ್ಲಿ ಕಲಿಯುವವರೆಲ್ಲಾ ಸ್ಟೀವ್ಜಾಬ್ಸ್ನ ನಡೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾರೆ. ಆತನ ನಿಧರ್ಾರಗಳ ಮೇಲೆ ಸಂಶೋಧನೆ ಮಾಡುತ್ತಾರೆ, ಚಚರ್ೆ ಮಾಡುತ್ತಾರೆ. ಮೊನ್ನೆ ಕೂಡ ಸ್ಟೀವ್ ತನ್ನ ಸ್ಥಾನಕ್ಕೆ ಸ್ಟೀವ್ ರಾಜೀನಾಮೆ ಕೊಟ್ಟಾಗ ಕೆಲವರು ಆಪಲ್ ಕಥೆ ಮುಗಿಯಿತು ಅಂದರು. ಮಾಧ್ಯಮಗಳು ಕಾಪೋರೇಟ್ ಜಗತ್ತಿನ ಸಂತ ಮತ್ತೇ ಬರಬೇಕು, ಇಡೀ ಜಗತ್ತಿಗೆ ಮತ್ತೇ ಮಾದರಿಯಾಗಬೇಕು ಅಂತ ಹೇಳಿದವು. ನಮ್ಮಲ್ಲಿ ಇನ್ಫೋಸಿಸ್ನ ನಾರಾಯಣಮೂತರ್ಿಯವರು ತಮ್ಮ ಸ್ಥಾನವನ್ನು ಪದತ್ಯಾಗ ಮಾಡಿದಾಗ ಅವರ ಬಗ್ಗೆ ನಮ್ಮ ದೇಶ ಮಾತ್ರ ಅವರ ಉತ್ತರಾಧಿಕಾರಿಯ ಬಗ್ಗೆ ಚಿಂತೆ ಹಾಗೂ ಚಚರ್ೆ ಮಾಡಿತೇ ವಿನಹ ಬೇರೆ ದೇಶಗಳು ಮಾಡಿದ್ದು ಕಡಿಮೆ. ಆದರೆ ಜಾಬ್ಸ್ ವಿಷಯದಲ್ಲಿ ಹಾಗಾಗಲಿಲ್ಲ. ನನ್ನ ವೈಯಕ್ತಿಕ ಕಾರಣಗಳಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಅಂತ ಹೇಳಿದ ನಾಲ್ಕು ಲೈನ್ಗಳು ಇಡೀ ಜಗತ್ತಿನ ಕಾಪರ್ೊರೇಟ್ ವಲಯದಲ್ಲಿ ಚಚರ್ೆಯ ವಿಷಯವಾಗಿ ಹೊರಹೊಮ್ಮಿತ್ತು. ಸುಮಾರು ನೂರಕ್ಕೂ ಹೆಚ್ಚು ದೇಶಗಳು ಆಪಲ್ ಕಂಪನಿಯ ಉತ್ಪನ್ನಗಳನ್ನು ಬಳಸುತ್ತಿವೆ. ತಂತ್ರಜ್ಞಾನ, ಗುಣಮಟ್ಟ, ಆಯ್ಕೆ ಸ್ವಾತಂತ್ರ್ಯ, ಮನರಂಜನೆ ಇವೆಲ್ಲವೂ ಆ್ಯಪಲ್ ಕಂಪನಿಯ ಮುಖ್ಯ ಆಧಾರಸ್ಥಂಭಗಳಾಗಿದ್ದವು. ಸ್ಟೀವ್ ಮುಖ್ಯವಾಗಿ ಗಮನಹರಿಸಿದ್ದು ಇವುಗಳ ಮೇಲೆ. ಆತ ಗೆದ್ದ ಪರಿಯು ಹೀಗೆ. ಸ್ಟೀವ್ ನಮಗಿಷ್ಟವಾಗಲು ಬಹಳಷ್ಟು ಕಾರಣಗಳಿವೆ. ಆತ ತನ್ನ ಪ್ರೋಪೇಷನಲ್ ಹಾಗೂ ಪರ್ಸನಲ್ ಲೈಫನ್ನು ತೆರೆದ ಪುಸ್ತಕದಂತೆ ಇಟ್ಟವನು. ಆತನನ್ನು ಕಂಡರೆ ಅಮೇರಿಕನ್ ಮಾಧ್ಯಮಗಳಿಗೆ ಅದೇನು ಉತ್ಸಾಹವೋ ಏನೋ, ಮೊದಮೊದಲು ಯುಎಸ್, ಇಂಗ್ಲೇಂಡ್ ಮಾಧ್ಯಮದವರಿಗೆ ಮಾತ್ರ ಪ್ರಿಯನಾಗಿದ್ದ ಈತ ಕೊನೆಗೆ ಇಡೀ ಜಗತ್ತಿಗೆ ಹತ್ತಿರವಾದ. ಆ್ಯಪಲ್ ಕಂಪನಿಯ ಪ್ರಾಡಕ್ಟ್ಗಳು ಕೈಸೇರದ ವ್ಯಕ್ತಿ ಇಲ್ಲ. ಜಾಬ್ಸ್ನ ಹೆಸರು ಕೇಳದವರು ಇಲ್ಲ ಅನ್ನುವ ಮಟ್ಟಿಗೆ ಬೆಳೆದುಬಿಟ್ಟಿತು. ಕಾಪರ್ೊರೇಟ್ ಜಗತ್ತಿನ ಎಲ್ಲ ದಿಗ್ಗಜರನ್ನು ಮೀರಿಸಿ ಜಗತ್ತಿನ ಬೆಸ್ಟ್ ಸಿಇಓ ಅಂತ ಕರೆಸಿಕೊಂಡ ಬಗೆಯಾದರೂ ಏನಿರಬಹುದು. ವಾಷರ್ಿಕವಾಗಿ ಕೇವಲ ಒಂದು ಡಾಲರ್ ಸಂಬಳಕ್ಕೆ ಕೆಲಸ ಮಾಡಿ ದುಡಿದರೂ ಈತ ಅಮೇರಿಕದ ಅತ್ಯಂತ ಶ್ರೀಮಂತ ವ್ಯಕ್ರಿ ಅಂತ ಕರೆಸಿಕೊಳ್ಳುತ್ತಾನೆ. ಆ್ಯಪಲ್ನಲ್ಲಿ ಸ್ಟೀವ್ ಇರುವವರೆಗೂ ಹೂಡಿಕೆ ಮಾಡಿದ ಹಣಕ್ಕೆ ಮೋಸವಿಲ್ಲ ಅನ್ನುವ ಮಾತು. ನಾನು ಕಂಪನಿಯಿಂದ ದೂರ ಇದ್ದರೂ, ನನ್ನ ಮನಸ್ಸು ಸದಾ ಕಂಪನಿಯ ಜೊತೆಗ ಇರುತ್ತೆ ಎನ್ನುತ್ತಿದ್ದ ಸ್ಟೀವ್ನ ಮನವರಿಕೆಯನ್ನು ಇಡೀ ಜಗತ್ತೇ ಕೊಂಡಾಡುತ್ತೆ. ಯಾಕೆ ಆತ ನಮಗಿಷ್ಟವಾದ. ಕೇವಲ ನಾವೆಲ್ಲಾ ಆ್ಯಪಲ್ ಪ್ರಾಡಕ್ಟ್ಗಳನ್ನು ಬಳಸುತ್ತೇವೆ ಅನ್ನುವುದರಿಂದಲೇ ಮಾತ್ರ ನಾವು ಅವನನ್ನು ಇಷ್ಟಪಡಬೇಕೆ! ಇದ್ದರೂ ಕೆಲವು ಅಂಶಗಳನ್ನು ನೋಡಿದಾಗ ಅಲ್ಲಗಳೆಯುಂತಿಲ್ಲ. ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ, ಸ್ಟೀವ್ನ ಸ್ಥಾನವನ್ನು ತುಂಬುವವನ್ನು ಹುಡುಕಿದವನು ಕೂಡ ಇದೇ ಸ್ಟೀವ್. ಖಾಯಿಲೆಯಿಂದ ತನ್ನ ಹುದ್ದೆಗೆ ಸರಿಯಾಗಿ ನಡೆದುಕೊಳ್ಳಲಾಗುತ್ತಿಲ್ಲ ಅಂತ ಆತನಿಗೆ ಮನಸ್ಸಿಗೆ ಕಾಡಿದ್ದಿರಬೇಕು, ಆಧ್ಯಾತ್ಮದ ಕಡೆ ವಿಪರೀತ ತುಡಿತವಿದ್ದ ಸ್ಟೀವ್ಗೆ ತನ್ನ ಜಗತ್ತಿನ ನಿರ್ಗಮನ ಅವನನ್ನು ಕಾಡಿದ್ದಿರಬೇಕು? ಉತ್ತರಾಧಿಕಾರಿಯನ್ನು ನಿಮರ್ಿಸಿ ಕಂಪನಿಯ ಭದ್ರಬುನಾದಿಯನ್ನು ಇನ್ನಷ್ಟು ಗಟ್ಟಿ ಮಾಡಿದ ಸ್ಟೀವ್ನ ಕಾರ್ಯವೈಖರಿಯಿಂದ ನಮ್ಮ ದೇಶದ ರಾಜಕಾರಣಿಗಳು ಕಲಿಯುವುದು ಬೇಕಾದಷ್ಟಿದೆ. ವಯಸ್ಸು ಮಾಗಿ, ಹಲ್ಲು ಬಿದ್ದು, ಓಡಾಡಲೂ ಆಗದಿದ್ದರೂ ಸಾಯುವರೆಗೂ ಆ ಸೀಟು ನನ್ನ ಬುಡದಲ್ಲೇ ಇರಬೇಕು, ಗೂಟದ ಕಾರಲ್ಲೇ ಓಡಾಡಬೇಕು ಅನ್ನುವ ನಮ್ಮ ರಾಜಕಾರಣಿಗಳ ದುರಾಸೆಯನ್ನು ಮೆಚ್ಚುವವರು ಯಾರು