Wednesday 3 January 2018

`ಬೇರು' ಕಾದಂಬರಿ



ಪ್ರೀತಿಯ ಸ್ನೇಹಿತರೇ,
 ನಾನೊಂದು ಕಾದಂಬರಿ ಬರೆಯಬೇಕೆಂಬ ಅನೇಕ ವರ್ಷಗಳ ಆಸೆ ಈ ವರ್ಷ ಈಡೇರಿದೆ. 
ಈ ವರ್ಷ ನಾನು ಬರೆದಿರುವ ಕಾದಂಬರಿಯ ಹೆಸರು `ಬೇರು'. ಸತತ ಮೂರ್ನಾಲ್ಕು ವರ್ಷಗಳ ಕಾಲ ಒಂದು ಕಥಾವಸ್ತುವಿನ ಚಿಂತನ-ಮಂಥನದಿಂದಾಗಿ ಅದು ಈ ಕಾದಂಬರಿಯ ರೂಪ ಪಡೆದುಕೊಂಡಿದೆ. ವಾಸ್ತವ ಜಗತ್ತಿನ ಕೆಲವು ಎಳೆಗಳು, ಅವುಗಳ ನಡುವಿನ ಬದುಕಿನ ಹೋರಾಟದ ವಸ್ತುವನ್ನಿಟ್ಟುಕೊಂಡು ಈ ಕಾದಂಬರಿ ಬರೆಯುವ ಪ್ರಯತ್ನ ಮಾಡಿರುವೆ.
ಈ ಕೃತಿಗೆ ಕನ್ನಡದ ಖ್ಯಾತ ವಿಮರ್ಶಕರಾಗಿರುವ ಪ್ರೊ.O L ನಾಗಭೂಷಣಸ್ವಾಮಿಗಳು ಬೆನ್ನುಡಿ ಬರೆದುಕೊಟ್ಟಿರುವುದು ನನ್ನ ಭಾಗ್ಯವೆಂದುಕೊಳ್ಳುವೆ.
ಕಾದಂಬರಿಯನ್ನು ಓದಿ ಅದರ ವಸ್ತುವಿಗೆ ತಕ್ಕಂತೆ ಮುಖಪುಟ ಡಿಸೈನ್ ಮಾಡಿದ ಸೌಮ್ಯ ಕಲ್ಯಾಣಕರ್ 
ಮತ್ತು ಕಾದಂಬರಿ ರಚನೆಯ ಸಂದರ್ಭ ಮತ್ತು ಬರೆದ ನಂತರ ಕಥಾವಸ್ತುವಿನ ಚಚರ್ೆ, ಚಿಂತನೆಯಲ್ಲಿ ಭಾಗಿಯಾಗಿ ಅದನ್ನು ಒಳ್ಳೆಯ ಕಾದಂಬರಿಯನ್ನಾಗಿ ರೂಪಿಸುವಲ್ಲಿ ನೆರವಾದ ಆತ್ಮೀಯ ಸ್ನೇಹಿತರನ್ನೂ ಈ ಕ್ಷಣ ನೆನಪಿಸಿಕೊಳ್ಳುತ್ತೇನೆ.
ನನ್ನ ಹಿಂದಿನ ಕಥಾಸಂಕಲನಗಳಾದ ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ, ಬ್ರಿಟಿಷ್ ಬಂಗ್ಲೆ ಮತ್ತು ಕವನ ಸಂಕಲನ `ತಿಗರಿಯ ಹೂಗಳು' -ಎಲ್ಲವೂ ನಿಮ್ಮೆಲ್ಲರ ಓದು, ಸಹಕಾರ, ಪ್ರೋತ್ಸಾಹದಿಂದ ಉತ್ತಮ ಕೃತಿಗಳೆಂದು ಗುರುತಿಸಿಕೊಂಡಿವೆ. ನಿಮ್ಮ ಪ್ರೋತ್ಸಾಹವನ್ನು `ಬೇರು' ಕಾದಂಬರಿಗೂ ನಿರೀಕ್ಷಿಸುತ್ತೇನೆ.
ಹೆಸರು: ಬೇರು
ಪುಟಗಳು: 372
ಬೆಲೆ: 330/-
ಪ್ರಕಾಶನ : ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
ಪುಸ್ತಕ ಜನವರಿ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಹೆಚ್ಚಿನ ಮಾಹಿತಿಗಳನ್ನು ತಿಳಿಸುವೆ.
ಧನ್ಯವಾದಗಳು
ಇಂತಿ
ತಮ್ಮವ
ಫಕೀರ
(ಶ್ರೀಧರ ಬನವಾಸಿ ಜಿ ಸಿ)