Sunday 12 May 2013

ಕನ್ನಡ ಸುದ್ದಿವಾಹಿನಿಗಳಿಗೆ ಮುಂದಿನ 5 ವರ್ಷ ಕಷ್ಟ ಕಷ್ಟ...!!! ಕೆಲವು ಬದುಕುಳಿದರೆ ಹೆಚ್ಚು?!

ಅಂತೂ ಇಂತೂ ಕರ್ನಾಟಕದಲ್ಲಿ ಸುಭದ್ರ ಸರ್ಕಾರ ನಿರ್ಮಾಣಗೊಂಡಿದೆ. ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯ ಸುಳ್ಳಾಗಿದೆ. 5 ವರ್ಷಗಳಲ್ಲಿ ನ್ಯೂಸ್ ಚಾನೆಲ್ ಗಳಲ್ಲಿ ಕೋಟೆ ಕಟ್ಟಿ ಮರೆದೋರೆಲ್ಲಾ ಈಗ ಮಣ್ ಮುಕ್ಕಿದರು.

ಒಂದೇ ಸರ್ಕಾರ, ಒಂದೇ ಪಕ್ಷದವರು, ಇಲ್ಲಿಯವರನ್ನು ಹೇಳಲಿಕ್ಕೆ, ಕೇಳಲಿಕ್ಕೆ ಮೇಲಿನವರು ಕುಳಿತುಕೊಂಡಿದ್ದಾರೆ. 
ಪ್ರಸ್ತುತ ವಿಧಾನ ಸೌಧದ ಮುಗುದಾರ ದೆಹಲಿ ಅಂಗಳದಲ್ಲಿ. ಇದಕ್ಕಿಂದ ದೊಡ್ಡ ವಿಷಯವೆನಂದರೆ, ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಬಹುಮತ ಪಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ!! ಈ ಬಾರಿಯ ಚುನಾವಣಾ ಫಲಿತಾಂಶ ದೊಡ್ಡ ಹೊಡೆತ ನೀಡಿದ್ದು, ಯಡಿಯೂರಪ್ಪನವರ ಕೆಜೆಪಿಗಲ್ಲ, ಗೌಡರ ಜೆಡಿಎಸ್ ಗಲ್ಲ..! ರಾಜಕೀಯ ಪಕ್ಷಗಳಿಗಿಂತ ಈ ಬಾರಿಯ ಚುನಾವಣಾ ಫಲಿತಾಂಶ ದೊಡ್ಡ ಹೊಡೆತ ಕೊಟ್ಟಿದ್ದು ಕನ್ನಡ ಸುದ್ದಿ ವಾಹಿನಿಗಳಿಗೆ.
5 ವರ್ಷದಲ್ಲಿ ಕರ್ನಾಟಕದ ರಾಜಕೀಯದ ಧಾಂಧಲೆಯಿಂದಾಗಿ ನಾಲ್ಕೈದು ಹೊಸ ಚಾನೆಲ್ಗಳು ಹುಟ್ಟಿಕೊಂಡವು. ದಿನಕ್ಕೊಂದು ಬ್ರೇಕಿಂಗ್ ನ್ಯೂಸ್ ನೀಡುತ್ತಿದ್ದ ವ್ಯಕ್ತಿಗಳೆಲ್ಲಾ ಈಗ ಮೂಲೇ ಸೇರಿದ್ದಾರೆ. 5 ವರ್ಷದಲ್ಲಿ ಯಾರ್ಯಾರು ಸುದ್ದಿ ವಾಹಿನಿಗಳಲ್ಲಿ ಸಖತ್ ಮಿಂಚಿದ್ದಾರೋ ಅವರೆಲ್ಲಾ ಈಗ ಕಾಣದಂತೆ ಮಾಯವಾಗಿದ್ದಾರೆ. ಸುಭದ್ರ ಸರ್ಕಾರವಿರುವುದರಿಂದ ಸುದ್ದಿ ಮನೆಯ ಹಸಿವಿನ ತೊಟ್ಟಿಯನ್ನು ಇಟ್ಟುಕೊಂಡಿರುವ ಸುದ್ದಿ ವಾಹಿನಿಗಳಿಗೆ ದಿನಕ್ಕೊಂದು ಬ್ರೇಕಿಂಗ್ ನ್ಯೂಸ್ ಸಿಗದೇ ಇದ್ದರೆ, ಬದುಕುವುದು ಕಷ್ಟವಿದೆ.
ದಕ್ಷಿಣ ಭಾರತದಲ್ಲೇ ಯಾವ ರಾಜ್ಯದಲ್ಲೂ ಇರದಷ್ಟು ಸುದ್ದಿ ವಾಹಿನಿಗಳು ಕನ್ನಡದಲ್ಲಿವೆ. 5 ವರ್ಷದ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳು ಈ ಸುದ್ದಿ ವಾಹಿನಿಗಳಿಗೆ ಕಾರಣೀಭೂತರು..
ಈಗ ಈ ಸುದ್ದಿ ವಾಹಿನಿಗಳನ್ನು ನೋಡುವವರು ತುಂಬಾ ಕಡಿಮೆ ಆಗಬಹುದು.ಟಿಆರ್ಪಿ ಪಾತಾಳಕ್ಕೆ ಇಳಿಯುತ್ತದೆ. ಜನ ನೋಡಲಿಲ್ಲವೆಂದರೆ, ವಾಹಿನಿಗಳಿಗೆ ಆದಾಯ ಹುಟ್ಟುವುದು ತುಂಬಾ ಕಷ್ಟ. ಆದಾಯವಿಲ್ಲದಿದ್ದರೆ ವಾಹಿನಿಗಳ ಉಸಿರಾಟ ನಿಲ್ಲುತ್ತದೆ. ಮತ್ತೇ ಸಮ್ಮಿಶ್ರ ಸರ್ಕಾರ ಬರುತ್ತದೆ ಅನ್ನುವ ಕನಸಿನಲ್ಲಿ ಇತ್ತಿಚಿನ ದಿನಗಳಲ್ಲಿ ಶುರುವಾದ ವಾಹಿನಿಯ ಕಥೆ ಕೂಡ ಇದಕ್ಕೆ ಸೇರುತ್ತದೆ.



1 comment: